ವಿ.ಕೆ.ನ್ಯೂಸ್ (ಮಾಲೂರು):ಮಾಲೂರು ತಾಲ್ಲೂಕಿನ ಆಲಂಬಾಡಿ ಗ್ರಾಮದ ಕ್ರೈಸ್ಟ್ ನಗರದಲ್ಲಿರುವ ಕ್ರೈಸ್ಟ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಇತರೆ ಪಠ್ಯತೇರ ಚಟುವಟಿಗಳನ್ನು (ಇ.ಸಿ.ಎ) ಉದ್ಘಾಟನೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕ್ರೈಸ್ಟ್ ಗ್ರೂಪ್ ಆಫ್ ಇನ್ಸಿಟಿಟ್ಯೂಷನ್ಸ್ ನ ವ್ಯವಸ್ಥಾಪಕರಾದ ರೆವೆರೆಂಡ್ ಫಾದರ್ ಜೋಷ್ ಕರಿಯಾಮದಮ್ ರವರು ಮಾತನಾಡುತ್ತಾ “ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ, ಶಿಕ್ಷಣವನ್ನು ಅಳೆಯುವ ಕಾಲ ಹೋಗಿದೆ. ಆಧುನಿಕ ಕಾಲದಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಮಟ್ಟವನ್ನು ನಿರ್ಧರಿಸುವುದು ಕೌಶಲ್ಯ, ಸಾಮಾನ್ಯ ಜ್ಞಾನಗಳ ಮೇಲೆ. ವಿದ್ಯಾರ್ಥಿಗಳು ಪಾಠದ ಜತೆ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಪ್ರಸ್ತುತ ದಿನಗಳ ಅಗತ್ಯ” ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ರೈಸ್ಟ್ ಇಂಟರ್ ನ್ಯಾಷನಲ್ ಸ್ಕೂಲ್ ನ ಉಪ ಪ್ರಾಂಶುಪಾಲರಾದ ರೆವೆರೆಂಡ್ ಅಭಿನ್ ಕಲ್ಲರಕಾಲ್ ಟಾಮಿ ರವರು ಮಾತನಾಡುತ್ತಾ “ವಿದ್ಯಾರ್ಥಿ ಜೀವನದಲ್ಲಿ ಆಸಕ್ತ ವಿಷಯಗಳ ಕಲಿಕೆಯತ್ತಲೂ ಗಮನ ನೀಡುವುದು. ಸಂಗೀತ, ನೃತ್ಯ, ಕ್ರೀಡೆಗಳಲ್ಲಿ ಆಸಕ್ತಿಯಿದ್ದರೆ ಅವುಗಳ ಕಲಿಕೆಗೂ ಸ್ವಲ್ಪ ಸಮಯ ಮೀಸಲಿಡಿಸಿ. ಒಂದಷ್ಟು ಒಳ್ಳೆಯ ಹವ್ಯಾಸಗಳ ರೂಢಿ ಮಾಡಿಕೊಳ್ಳುವುದರಿಂದ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಿಸಲು ಸಹಾಯಕಾರಿ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲರಾದ ರೆವೆರೆಂಡ್ ಫಾದರ್ ಡಾ.ರಾಜೇಶ್ ಜಾರ್ಜ್ ರವರು ಮಾತನಾಡಿ “ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಿದರೆ ನಾಯಕತ್ವದ ಗುಣ ಬೆಳೆಯುತ್ತದೆ. ಕಾಲೇಜು, ಶಾಲೆಗಳಲ್ಲಿರುವ ಸಂಘಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ನಾಯಕತ್ವದ ಗುಣ ಬೆಳೆಯುತ್ತದೆ ಎಲ್ಲಾರೂ ಭಾಗವಹಿಸಿ” ಎಂದರು.
ಕ್ರೈಸ್ಟ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಇತರೆ ಪಠ್ಯ ಚಟುವಟಿಕೆಗಳಾಗಿ ಕರಾಟೆ, ಕುಂಗ್-ಪೂ, ರೈಫಲ್ ಶೂಟಿಂಗ್, ಸ್ಕೇಟಿಂಗ್, ವೆಸ್ಟ್ರನ್ ಡ್ಯಾನ್ಸ್, ಶಾಸ್ತ್ರೀಯ ಭರತನಾಟ್ಯ, ಸಂಗೀತ, ಕೀಬೋರ್ಡ್, ಗೀಟಾರ್, ತಬಲ, ಯೋಗ, ಸ್ಕೌಟ್ ಅಂಡ್ ಗೈಡ್, ಸ್ಕೂಲ್ ಬ್ಯಾಂಡ್, ವಾಲಿಬಾಲ್, ಪುಟ್ ಬಾಲ್, ರಂಗಸಜ್ಜಿಕೆ, ಹಾಗೂ ಮೆಹಂದಿ ಇತರೆ ಎಲ್ಲಾ ರೀತಿಯಲ್ಲಿ ಚಟುವಟಿಕೆಗಳನ್ನು ಉದ್ಘಾಟನೆ ಮಾಡುವ ಮೂಲಕ ಸಂತಸದ ಕ್ಷಣಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಕ್ರೈಸ್ಟ್ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲರಾದ ರೆವೆಂಡ್ ಫಾದರ್ ಡಾ.ರಾಜೇಶ್ ಜಾರ್ಜ್, ಕ್ರೈಸ್ಟ್ ಕಾಲೇಜು ಹಾಗೂ ವಿಜ್ಞಾನ ವಿಭಾಗದ ವ್ಯವಸ್ಥಾಪಕರು ಹಾಗೂ ಉಪಪ್ರಾಂಶುಪಾಲರಾದ ರೆವೆರೆಂಡ್ ಫಾದರ್ ಎಬಿನ್ ಫ್ರಾನ್ಸಿಸ್, ಇತರೆ ಪಠ್ಯತೇರ ಚಟುವಟಿಕೆಗಳ (ಇ.ಸಿ.ಎ) ಸಂಯೋಜಕರಾದ ಜಾಕೋಬ್ ಮ್ಯಾಥೋ, ಶ್ವೇತಾಂಜಲಿ ಭರತನಾಟ್ಯ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್, ತಬಲ ವಾದಕರಾದ ಸೋಮು, ವಿವಿಧ ಕಲಾ ಪ್ರಕಾರದ ಶಿಕ್ಷಕರು, ಕ್ರೈಸ್ಟ್ ಇಂಟರ್ ನ್ಯಾಷನಲ್ ಸ್ಕೂಲ್ ನ ಎಲ್ಲಾ ತರಗತಿಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.