(www.vknews.in) : ಅಲ್ಲಾಹು ಅಕ್ಬರ್.. ಈ ಐತಿಹಾಸಿಕ ದೃಶ್ಯಗಳನ್ನು ನೋಡುವುದೇ ಅಧ್ಭುತ. ರಬೀವುಲ್ ಅವ್ವಲ್ 12ರ ಸುಪ್ರಭಾತ ಸಮಯ ಯೆಮೆನ್ ಸಾಧಾತ್ ಗಳ ಅಗ್ರೇಹರಣ್ಯ ಸೂಫಿವರ್ಯರಾದ ಉಮರ್ ಬಿನ್ ಹಫೀಝ್ ಮಹಾನರ ಸಮ್ಮುಖದಲ್ಲಿ ಸುಲ್ತಾನುಲ್ ಉಲಮಾ ಸಮಾಜಕ್ಕೆ ಐತಿಹಾಸಿಕ ಆಹ್ವಾನಿತ ಜನರ ಸಮ್ಮುಖದಲ್ಲಿ ಮಸ್ಜಿದುಲ್ ಆಸಾರ್ ಇದರ 9ಕವಾಟಗಳಲ್ಲಿ ಮೊದಲನೇ ಕವಾಟ ಉದ್ಘಾಟನೆ ಗೊಳಿಸಿದರು. 7000ಸಾವಿರ ಜನರು ಮಳೆ, ಬಿಸಿಲಿನ ತೊಂದರೆಯಿಲ್ಲದೆ ಮಸೀದಿ ಒಳಗಡೆಯೇ ನಮಾಝಿನ ಸೌಕರ್ಯವಿದ್ದು , ಒಟ್ಟು ಮೂರು ಅಂತಸ್ಥಿನಲ್ಲಿ ನಮಾಝಿಗೆ ಅವಕಾಶವಿದೆ. ಛಾವಣಿ ಹೊರತಾದ ಮಸೀದಿ ವ್ಯಾಪ್ತಿ ಸೇರಿ ಒಟ್ಟು 25000ಜನರು ಒಂದೇ ಸಂದರ್ಭ ನಮಾಝ್ ನಿರ್ವಹಿಸಬಹುದಾಗಿದೆ.
ಈಗಾಗಲೇ 85ಜನರು ಮಸೀದಿ ಪರಿಪಾಲಕರಾಗಿ ಕಾರ್ಯನಿರ್ವಹಿಸಲು ಉದ್ಯೋಗಿಗಳಾಗಿದ್ದು, ಇತಿಯೋಪಿಯಾದ ಇಮಾಮ್ ಸಹಿತ ಇತರ ಇಮಾಮ್ ಗಳು ಮುಅಝ್ಝಿನ್ ಗಳು ಕಾರ್ಯನಿರ್ವಹಿಸಲಿದ್ದಾರೆ. ಒಂದು ತಿಂಗಳ ಮಸೀದಿ ಪರಿಪಾಲನೆಯ ಖರ್ಚು ವೆಚ್ಚಗಳು 35ಲಕ್ಷವೆಂದು ಅಂದಾಜಿಸಲಾಗಿದೆ. ಈಗ ಅಧಿಕೃತವಾಗಿ ಮೊದಲನೇ ಹಂತದಲ್ಲಿ ಮಸೀದಿ ಉಧ್ಘಾಟನೆಯಾಗಿದ್ದು, ಪೂರ್ಣವಾಗಿ ಕಾರ್ಯಾಚರಿಸಲು ನವೆಂಬರ್ 17ಶುಕ್ರವಾರ ಪ್ರಾರಂಭಿಸಲಾಗುವುದು. ನವೆಂಬರ್ 19 ಅಧಿಕೃತ ಕಾರ್ಯಕ್ರಮಗಳ ಸಮಾಪ್ತಿಯಾಗಿದೆ.
ಉದ್ಘಾಟನಾ ಕಾರ್ಯಕ್ರಮ ಗಳು ಪೂರ್ಣವಾಗಿ ವ್ಯತ್ತಸ್ಥ ಶೈಲಿಯಲ್ಲಿ ಕ್ರೋಢೀಕರಿಸಿದ್ದು , ಇಸ್ಲಾಂ ,ನಾಗರಿಕತೆ, ಆಧುನಿಕ ನಗರ ಸಜ್ಜೀಕರಣ ಈ ರೀತಿ ಹಲವು ವಿಚಾರ ವಿನಿಮಯ ಗಳ ಜಿಲ್ಲಾವಾರು ಸಂಗಮಗಳು ಉಧ್ಘಾಟನಾ ಭಾಗವಾಗಿ ತಿಂಗಳುಗಳು ಪೂರ್ಣವಾಗಿ ನಡೆಯುತ್ತದೆ.
ಭಾರತದ ಅತೀ ದೊಡ್ಡ ಕಲ್ಚರಲ್ ಸೆಂಟರ್ ಹೆಮ್ಮೆಗೆ ಈ ಭವ್ಯ ಮಸೀದಿ ಪಾತ್ರವಾಗಲಿದೆ. ಮಸೀದಿ ವ್ಯಾಪ್ತಿಯ ಕೇವಲ 125ಎಕ್ರೆ ಪ್ರದೇಶ ಕೇವಲ ವಿಧ್ಯಾಭ್ಯಾಸ ಸಮುಚ್ಚಯಕ್ಕಾಗಿ ಮೀಸಲಿರಿಸಿದ್ದು, ಸುತ್ತಮುತ್ತಲಿನ ನೂರಾರು ಎಕ್ರೆ ಪ್ರದೇಶದಲ್ಲಿ ಭವ್ಯವಾದ ಯೆಮೆನ್ ಪರಂಪರೆಯನ್ನು ಬಿಂಬಿಸುವ ಪಟ್ಟಣ ಸೃಷ್ಟಿಯಾಗುತ್ತಿದೆ. ಈಗಾಗಲೇ ನಾಲೇಜ್ ಸಿಟಿಯಲ್ಲಿ ಪ್ರಾರಂಭಿಸಿದ ಲಾ ಕಾಲೇಜು, ಯುನಾನಿ ಮೆಡಿಕಲ್ ಕಾಲೇಜ್ ,ಅಲಿಫ್ ಗ್ಲೋಬಲ್ ಸ್ಕೂಲ್ , ಸಹಿತ ಹತ್ತಾರು ಸಂಸ್ಥೆಗಳಲ್ಲಿ ವಿದೇಶಗಳಿಂದಲೂ, ಶಿಕ್ಷಕರಾಗಿ ,ವಿದ್ಯಾರ್ಥಿಗಳಾಗಿ ಇದ್ದಾರೆ. ಮತ್ತು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಾಗಿ ಬೇಡಿಕೆಯ ಕ್ಯಾಂಪಸ್ ಆಗಿ ಮಾರ್ಪಟ್ಟಿದೆ. ಅಲ್ ಹಮ್ದುಲಿಲ್ಲಾಹ್
ಒಂದೆರಡು ಮೆಡಿಕಲ್ ಕಾಲೇಜು ಈಗಾಗಲೇ ಪ್ರಾರಂಭಗೊಂಡಿದ್ದು ಮಗದೊಂದು ಮೆಡಿಕಲ್ ಕಾಲೇಜ್ ಉಸ್ತಾದರ ಕನಸಿನಲ್ಲಿದೆ. ನೆನಪಿಡಿ ಉಸ್ತಾದರ ಕನಸಿನ ಸಾಕ್ಷಾತ್ಕಾರದ ಪ್ರಾರಂಭವಷ್ಠೆ ಇದು. ಇದು ಕೇವಲ ಪ್ರಾರಂಭಿಸಿ ಮುಚ್ಚಿಡುವ ಮಸೀದಿಯಲ್ಲ, ದಿನದ 5ವಕ್ತ್ ನಲ್ಲೂ ಪೂರ್ಣವಾಗಿ ಮಸೀದಿ ನಮಾಝಿಗೆ ಸಾಕ್ಷಿಯಾಗುವ ವ್ಯವಸ್ಥೆಯಾಗಿದೆ ಮರ್ಕಝ್ ಶರೀಅ ಸಿಟಿ ಒಳಗೊಂಡ ನಗರ ವ್ಯವಸ್ಥೆ.
ಉಸ್ತಾದ್ ಇಷ್ಟು ಗುರಿ ತಲುಪಲು ಕೇಳಿದ ಆಕ್ಷೇಪ, ಗಲ್ಲಿ ಗಲ್ಲಿಗಳಲ್ಲಿ ನಡೆದ ನಿಂದನೆಯ ಭಾಷಣಗಳು ಒಂದೆರಡಲ್ಲ. ಅಳೆದಾಡಿದ ಕೋರ್ಟ್ ,ಕೇಸ್ ಒಂದೆರಡು ಅಲ್ಲ, ಆದರೆ ನೆನಪಿಡಿ ಉಸ್ತಾದ್ ಗುರಿ ತಲುಪುವಾಗಲೂ, ಅದರ ಪ್ರಯತ್ನದಲ್ಲಿದ್ದಾಗಲೂ ಒಂದಕ್ಷರ ವಿರೋದಿಸಿದವರ ವಿರುದ್ದ ಮಾತನಾಡಿಲ್ಲ.
ಉಸ್ತಾದ್ ವಿಶ್ರಾಂತಿಯಿಲ್ಲದ ಜೀವನದ ನಡುವೆ ಅಲ್ಪ ಅನಾರೋಗ್ಯಕ್ಕೀಡಾಗಿದ್ದಾರೆ, ಆದರೆ ಕೆಲವೇ ದಿನದಲ್ಲಿ ಮತ್ತೆ ನಮ್ಮ ಮುಂದೆ ಬಂದೇ ಬರುತ್ತಾರೆ. ಅಲ್ಲಾಹು ತೌಫೀಕ್ ನೀಡಲಿ ಆಮೀನ್. ಎಲ್ಲರೂ ತಮ್ಮೆಲ್ಲಾ ಪ್ರಾರ್ಥನೆಗಳಲ್ಲಿ ಮರೆಯದೆ ಶೈಖುನಾ ರನ್ನು ಸೇರಿಸಿ ಪ್ರತ್ಯೇಕ ಪ್ರಾರ್ಥಿಸಿರಿ. ಈ ಶತಮಾನ ಕಂಡ ನೂರ್ ನ ಪ್ರಕಾಶವಾಗಿದ್ದಾರೆ ಸುಲ್ತಾನುಲ್ ಉಲಮಾ..
✍️ ರಾಫಿ ನಗರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.