(www.vknews.in) : ಇಡೀ ರಾಜ್ಯವನ್ನೇ ಬೇಗುದಿಗೆ ತಳ್ಳಿದ ಬೆಳ್ಳಾರೆಯ ಮುಗ್ದ ಯುವಕನ ಕೊಲೆಯ ನಂತರ ನಮ್ಮ ಜಿಲ್ಲೆಯಲ್ಲಿ ನಡೆದ ಅಹಿತಕರ ಬೆಳವಣಿಗೆ ಜನರ ನೆನಪಿನಿಂದ ಮಾಸುವ ಮುನ್ನವೇ ಇದೀಗ ಮತೀಯ ಬ್ರಾಂತಿಯಿಂದ ಬಳಲುತ್ತಿರುವ ಯುವಕರ ಗುಂಪೊಂದು ಬಟ್ಟೆ ವ್ಯಾಪಾರಿಗಳಿಗೆ ಮನಸೋಇಚ್ಚೆ ಯದ್ವಾತದ್ವ ಹಲ್ಲೆ ನಡೆಸಿ ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ವಿಕೃತ ಆನಂದ ಪಟ್ಟ ಘಟನೆ ಪುತ್ತೂರಿನ ಕಾಣಿಯೂರಿನಿಂದ ವರದಿಯಾಗಿದೆ.
ಕಾನೂನು ಕೈ ಗೆತ್ತಿಕೊಳ್ಳುವ ಇಂತಹ ಕೃತ್ಯಗಳಿಂದಾಗಿ ಪೋಲಿಸ್ ವ್ಯವಸ್ಥೆಯಲ್ಲಿ ಜನರು ನಂಬಿಕೆ ಕಳೆದು ಕೊಂಡು ನಾಡಿನಲ್ಲಿ ಅರಾಜಕತೆ ಉಂಟಾಗಲು ಕಾರಣವಾಗುತ್ತದೆ. ವ್ಯಾಪಾರಿ ಯುವಕರ ಮೇಲೆ ಕಳ್ಳತನದ ಸುಳ್ಳು ಆರೋಪ ಹೊರಿಸಿ ಈ ರೀತಿ ಮಾಡಲಾಗಿದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ಒಂದು ವೇಳೆ ಅವರು ಕಳ್ಳತನ ಮಾಡಿದ್ದರೆ ಅದಕ್ಕೆ ತಕ್ಕ ಶಿಕ್ಷೆ ಆಗಲೇ ಬೇಕು. ಅದೇ ರೀತಿ ಕಾನೂನು ಕೈಗೆತ್ತಿಕೊಂಡ ಯುವಕರ ವಿರುದ್ದ ರಾಜಕೀಯ ಪ್ರಭಾವಕ್ಕೊಳಗಾಗದೆ ಪೋಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದೇ ಸಾರ್ವಜನಿಕರ ಆಗ್ರಹ. ಪೋಲೀಸರು ಈ ಘಟನೆಯ ನೈಜತೆಯ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡ ಬೇಕು.
ನಮ್ಮ ಮುಖ್ಯಮಂತ್ರಿ ಹುಟ್ಟು ಹಾಕಿದ ಕ್ರಿಯೆಗೆ ಪ್ರತಿಕ್ರಿಯೆ ಎಂಬ ಸಿದ್ದಾಂತ ಜನರು ಜಾರಿಗೊಳಿಸಲು ಹೊರಟರೆ ಅದರಿಂದ ಎಲ್ಲರಿಗೂ ತೊಂದರೆ ಆಗಬಹುದು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.