(www.vknews.in)
ಇಕ್ಬಾಲ್ ಕುತ್ತಾರ್ ಹೆಸರು ಕೇಳದವರು ದ.ಕ. ಜಿಲ್ಲೆಯಲ್ಲಿ ವಿರಳ.ಸರಳ, ಸಜ್ಜನಿಕೆಯ ಯುವಕ. ಪರೋಪಕಾರಿ.
ಎನ್ ಕೌಂಟರ್ ಎಂಬ ಪತ್ರಿಕೆ ನಡೆಸುತ್ತಿದ್ದ ಉತ್ಸಾಹೀ ತರುಣ. ಈಗ myositis ಎಂಬ ಅಪರೂಪದ ಕಾಯಿಲೆಗೆ ತುತ್ತಾಗಿ ನಿಶ್ಯಕ್ತಿ, ನಿತ್ರಾಣದಿಂದ ಬಳಲುತ್ತಿದ್ದಾರೆ.. ಆದರೆ ಸ್ವಾಭಿಮಾನಕ್ಕೆ ನಿತ್ರಾಣ ಬಾಧಿಸಿಲ್ಲ. ” ನಿಮ್ಮ ಸಹಾಯ ಬೇಡ, ಪ್ರೀತಿ ಸಾಕು” ಅನ್ನುತ್ತಿರುವ ಆತ್ಮಾಭಿಮಾನಿ. ವಿಧಿಯ ಆಟ ಅಂದರೆ ಇದೇನೆ. ಅದೆಷ್ಟೋ ಮಂದಿಯ ರೋಗ, ಕಷ್ಟಗಳಿಗೆ ತನ್ನಿಂದಾಗುವ ಸಹಾಯವನ್ನು ಸ್ವತಃ ಮಾಡುತ್ತಿದ್ದ, ತನ್ನಿಂದಾಗದ ಸಹಾಯವನ್ನು ಸಹಾಯ ಮಾಡಬಲ್ಲವರಿಂದ ಸಹಾಯ ಕೊಡಿಸಿದ್ದ ಈ ಯುವಕ ನಿಮ್ಮ ಸಹಾಯ ಬೇಡ ಅನ್ನುವ ಪರಿಸ್ಥಿತಿ. ಅವರ ಆತ್ಮಾಭಿಮಾನ ಕ್ಷೀಣಿಸಿಲ್ಲ ನಿಜ. ಹಾಗೆಂದು ನಮ್ಮ ಕರ್ತವ್ಯವೂ ಕ್ಷೀಣಿಸಬಾರದು ತಾನೇ? ನಾವು ನಮ್ಮಿಂದಾಗುವ ಸಹಾಯ ಮಾಡಬೇಕು. ಇಕ್ಬಾಲ್ ಕುತ್ತಾರ್ ಎಂಬ ಆ ಚುರುಚುರುಕಿನ ಯುವಕ ಪೂರ್ವಾಧಿಕ ಶಕ್ತಿ ಯೊಂದಿಗೆ ಎದ್ದು ಬರಲಿ ಇದು ನನ್ನ ಪ್ರಾರ್ಥನೆ. ನೀವೂ ಪ್ರಾರ್ಥಿಸಿರಿ ಡಿ. ಐ. ಅಬೂಬಕರ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.