ಚಿಕ್ಕಬಳ್ಳಾಪುರ, (ವಿಶ್ವ ಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯದಲ್ಲಿ ಆವರಿಸಿದ್ದ ಕೊರೋನಾ ಸೋಂಕು ನಿಯಂತ್ರಿಸುವ ವಿಚಾರದಲ್ಲಿ ಆರೋಗ್ಯ ಸಚಿವ ಡಾಕ್ಟರ್ ಸುಧಾಕರ್ ಅವರು ಫ್ಯಾಂಟಾಸ್ಟಿಕ್ ಜಾಬ್ ಮಾಡಿದ್ದಾರೆ ಎಂದು ನಟ ಚಕ್ರವರ್ತಿ ಕಿಚ್ಚ ಸುದೀಪ್ ಶ್ಲಾಘಿ ಸಿದ್ದಾರೆ.
ನಗರದ ಸರ್ ಎಂ.ವಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದ ಅವರು ಜಿಲ್ಲೆಯ ಜನರಿಗೆ ಹೊಸ ವರ್ಷದ ಶುಭಾಶಯಗಳು ಕೋರಿ ಆರೋಗ್ಯ ಸಚಿವ ಡಾಕ್ಟರ್ ಕೆ ಸುಧಾಕರ್ ಅವರು ಕರ್ನಾಟಕ ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಿಸಲು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.
ಚಿಕ್ಕಬಳ್ಳಾಪುರ ಉತ್ಸವ ಒಂದು ಸಣ್ಣ ಕಾರ್ಯಕ್ರಮ ಎಂದು ಭಾವಿಸಿದ್ದೆ ಆದರೆ ಇಲ್ಲಿ ನೋಡಿದರೆ ಎಲ್ಲವೂ ಅದ್ಭುತವಾಗಿದೆ ನನ್ನನ್ನು ಉತ್ಸವಕ್ಕೆ ಬರಲು ಸಚಿವರು ಆಮಂತ್ರ ನೀಡಿದರು ನಮ್ಮೂರಿಗೆ ಬರಲು ನಾನು ಯಾವಾಗಲೂ ರೆಡಿ ಪ್ರೀತಿಯಿಂದ ಕರೆದರೆ ಎಲ್ಲಾ ಕಡೆ ಹೋಗುತ್ತೇನೆ ಎಂದರು.
ಇದು ಚಿಕ್ಕಬಳ್ಳಾಪುರ ಅಲ್ಲ ದೊಡ್ಡಬಳ್ಳಾಪುರ ಎಂದು ಬಣ್ಣಿಸಿದ ಕಿಚ್ಚ ಸುದೀಪ್ ಅವರು ನಗರದಲ್ಲಿ ಸೊಗಸಾದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಲ್ಲರೂ ಆನಂದಿಸಿ ನನಗೆ ಆರೋಗ್ಯ ಸಚಿವರು ಆಮಂತ್ರಣ ನೀಡಿ ಉಪಕಾರ ಮಾಡಿದ್ದಾರೆ ಎಂದು ಅಭಿನಂದಿಸಿದರು.
ನಾವು ಕಲಾವಿದರು ನಮ್ಮ ಸಿನಿಮಾ ನೋಡಿ ಪ್ರೀತಿಸುವ ಅಭಿಮಾನಿಗಳ ಚಪ್ಪಾಳೆ ಮತ್ತು ನಗುವಿನಿಂದ ನಮಗೆ ಶಕ್ತಿ ತುಂಬುತ್ತದೆ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಭಾಗವಹಿಸಿ ಇಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನೋಡಿ ಆನಂದಿಸಬೇಕೆಂದು ಮನವಿ ಮಾಡಿದರು.
ವರದಿ ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.