“ಉತ್ತಮ ಪತ್ರಿಕೆಗಳು ಪ್ರಪಂಚದ ಸಮತೋಲಿತ ನೋಟವನ್ನು ನೀಡುವುದನ್ನು ನಂಬುತ್ತದೆ. ಆದರೆ ಕೆಲವರು ಆ ನಂಬಿಕೆಯನ್ನು ದುರ್ಬಳಕೆ ಮಾಡುತ್ತಾರೆ ಮತ್ತು ಸತ್ಯವನ್ನು ಸುಳ್ಳಿನೊಂದಿಗೆ ಸಮತೋಲನಗೊಳಿಸಲು ಬಳಸುತ್ತಾರೆ” ಎಂಬ ಚಿಂತಕ ನಿಕ್ ಡೇವಿಸ್ ನ ಮಾತುಗಳು ಇಂದಿನ ಪ್ರಸ್ತುತ ಸಮಾಜದಲ್ಲಿನ ಸ್ಥಿತಿಗತಿಗೆ ಹಿಡಿದ ಕನ್ನಡಿಯಂತಿದೆ.
ಇಂತಹ ಸಂದರ್ಭದಲ್ಲಿಯೂ ಯಾವುದೇ ಫಲಾಪೇಕ್ಷೆ ಇಲ್ಲದೇ ‘ದಮನಿತರ ದ್ವನಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸತ್ಯ ಸುದ್ದಿಗಳನ್ನು ಜನಮನಕ್ಕೆ ತಲುಪಿಸುವಲ್ಲಿ ವಿಶ್ವ ಕನ್ನಡಿಗ ಅಂತರ್ಜಾಲ ವಾರ್ತಾತಾಣವು ಹೆಜ್ಜೆ ಹಾಕುತ್ತಿರುವುದು ಪ್ರಶಂಸನೀಯ.
ಲೇಖನ, ಕವನ, ಕಥೆ, ಅಂಕಣ ಹೀಗೆ ಹಲವು ವೈವಿಧ್ಯತೆಗಳ ಮೂಲಕ ಯುವ ಬರಹಗಾರರನ್ನು ಹಾಗೂ ಓದುಗರನ್ನು ದೇಶ ವಿದೇಶಗಳಲ್ಲಿ ಏಕಕಾಲದಲ್ಲಿ ಸೆಳೆದ ಈ ಸುದ್ದಿ ತಾಣವು ಮುಂಬರುವ ದಿನಗಳಲ್ಲಿ ಮತ್ತಷ್ಟು ಜನಪರ ಹಿತವನ್ನು ಕಾಪಾಡುವ ಹಾಗೂ ಮೌಲ್ಯ ಬಿತ್ತರಿಸುವ ಮಾಧ್ಯಮವಾಗಲಿ.
ವಿಕೆ ಅಂತರ್ಜಾಲ ಮಾಧ್ಯಮದ ಹದಿಮೂರನೇ ವಾರ್ಷಿಕೋತ್ಸವದ ಸಂಭ್ರಮಕ್ಕೆ ಪತ್ರಿಕಾ ಬಳಗಕ್ಕೆ ತುಂಬು ಹೃದಯದ ಅಭಿನಂದನೆಗಳು.
– ರಮೀಝ ಯಂ.ಬಿ ಕುಕ್ಕಾಜೆ ಕನ್ನಡ ಹಾಗೂ ಬ್ಯಾರಿ ಲೇಖಕಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.