ಕವನ : (www.vknews.com)
ರಭಸದಿಂದ ಹರಿಯುತಿತ್ತು ನೇತ್ರಾವತಿ ನದಿಯಂದು ಗರ ಬಡಿದಂತೆ ತಲುಪಿತ್ತು ಮುಳುಗು ತಜ್ಞರಿಗೆ ವಿಷಯವೊಂದು
ಕೂಡಲೇ ಹಾರಿದರು ತಮ್ಮ ಜೀವದ ಹಂಗು ತೊರೆದು ಇನ್ನೊಂದು ಜೀವವ ರಕ್ಷಿಸುವ ಸಲುವಾಗಿ ತಮ್ಮ ಜೀವ ಧಾರೆಯೆರೆದು
ರಕ್ಸಿಸಲು ಪ್ರಯತ್ನಿಸಿದ ತೌಸೀಫ್ , ಮುಹಮ್ಮದ್ ,ಆರಿಫ್ ,ಸಮೀರ್ ಜಾಯಿದ್ ಎಂಬ ಹೆಸರಿನವರಿವರು ಬಹುಶಃ ಹೆಸರು ನೋಡಿ ತಬ್ಬಿಬ್ಬಾಗಿರಬಹುದು ನಮ್ಮ ರಾಜಕೀಯ ಮುಖಂಡರು
ಸತ್ತ ಶವವನ್ನು ಹೊತ್ತಿಸಲು ಸ್ಥಳ ಕೊಡದ ನಮ್ಮ ಈ ಜಿಲ್ಲೆಯಲ್ಲಿ ಲೆಕ್ಕಿಸದೆ ಅರಿತು ನೀಡಿದರವರು ಉಸಿರು, ತುಟಿಗೆ ತುಟಿಯನ್ನು ಸೇರಿಸುತಲಿ
ಆದರೆ ಬರೆದಿತ್ತು ,ನಿಶಾಂತ್ ಅವರ ಹಣೆಯಲ್ಲಿ ಮರಣ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಜಗದೊಡೆಯನ ತೀರ್ಮಾನ
ಇದು ನಡೆದಿದ್ದು ಕಲ್ಲಡ್ಕ ಎಂಬ ಕೋಮುದ್ವೇಷ ಕಾರುವ ನಾಡಿನಲ್ಲಿ ತಲೆ ತಗ್ಗಿಸಿದರು ಹಲವರು ಮಾನವೀಯತೆಗೆ ಬೆಲೆ ಕೊಡದ ಈ ಪ್ರದೇಶದಲ್ಲಿ
ದೇವರಾಟವೇ ಬೇರೆ ನಿಶಾಂತ್ ಮಾತ್ರ ನಮ್ಮಿಂದ ಕಣ್ಣರೆಯಾದ * ಮಾನವೀಯತೆಯ ಸುಂದರ ಪಾಠವನ್ನು ಮಾತ್ರ ಜನರೆಡೆಯಲ್ಲಿ ಬಿಟ್ಟು ಹೋದ
ಚಿರ ಶಾಂತಿ ನೀಡಲಿ ಲೋಕ ಪಾಲಕನು ಅವರ ಆತ್ಮಕ್ಕೆ ಇನ್ನಾದರೂ ಬದಲಾದರೆ ಬೀರಬಹುದು ಶಾಂತಿಯ ಪರಿಮಳ ನಮ್ಮ ದೇಶಕ್ಕೆ
ಎಲ್ಲಾ ದೇವೇಚ್ಛೆ ಎಂದು ಮುಂದೆ ನಡೆ ಓ ಮಾನವ ಬೇಡುವೆ ನಿನ್ನಲ್ಲಿ ಕಲಿಸು ನಮಗೆ ಸೌಹಾರ್ದತೆಯ ಪಾಠವ
ಅಶ್ರಫ್ ಪರ್ಲಡ್ಕ ದುಬೈ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.