ವಿಟ್ಲ (www.vknews.com) : ಅಪ್ರಾಪ್ತ ಹುಡುಗನ ಮೇಲೆ ವಿಟ್ಲದ ಭಜರಂಗದಳದ ಮುಖಂಡ ದಿನೇಶ್ ಕನ್ಯಾನ ಎಂಬವನು ಹಲ್ಲೆ ನಡೆಸಿ ನಿಂದಿಸುವ ವೀಡಿಯೋ ವೈರಲ್ ಆಗಿದ್ದು ಈ ಘಟನೆಯ ಬಗ್ಗೆ ತನಿಖೆ ನಡೆಸಿ ಹಲ್ಲೆ ನಡೆಸಿದವರ ವಿರುದ್ದ ಸೂಕ್ತ ಕ್ರಮಕೈಗೊಂಡು ಬಂಧನ ಮಾಡುವಂತೆ ಕೊಳ್ನಾಡು ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್ ಮಹಮ್ಮದ್ ಅವರು ಡಿವೈಎಸ್ಪಿ , ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ , ಎಸೈ ಇವರುಗಳಿಗೆ ಆಗ್ರಹ ಮಾಡಿದ್ದಾರೆ.
ಹಲ್ಲೆಗೆ ಒಳಗಾದ ಬಾಲಕನ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳಿಂದ ಕೋಮು ಗಲಭೆಗಳು ಸ್ರಷ್ಟಿಯಾಗಲು ಕಾರಣವಾಗುತ್ತಿದ್ದು ಕೂಡಲೇ ಇಂತಹ ರೌಡಿ ಶೀಟರ್ ಗಳನ್ನು ಬಂಧಿಸಿ ಸಮಾಜದ ನೆಮ್ಮದಿ ಕಾಪಡಬೇಕೆಂದು ಪೋಲಿಸ್ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್ ಮಹಮ್ಮದ್ ಆಗ್ರಹ ಮಾಡಿರುತ್ತಾರೆ. ಸೂಕ್ತ ತನಿಖೆ ನಡೆಸದೇ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.