ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಪ್ರಸ್ತುತ ಕಾರ್ಯಚರಣೆಗೆ ಒಳಪಟ್ಟ ಮಿಸ್ಕಿತ್ ಆಸ್ಪತ್ರೆ ಸುರತ್ಕಲ್ (ಕೆ.ಪಿ.ಎಂ.ಇ.ಎ) ಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದು, ಆಯುರ್ವೇದ ವೈದ್ಯರು, ಅಲೋಪತಿ ಪದ್ದತಿಯಲ್ಲಿ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆಯನ್ನು ನೀಡುವುದರ ಜೊತೆಗೆ, ಈ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶುಶ್ರೂಷಕಿಯರು ಕೂಡ ಕರ್ನಾಟಕ ನರ್ಸಿಂಗ್ ಕೌನ್ಸಿಲ್ನಲ್ಲಿ ಮಾನ್ಯತೆ ಪಡೆಯದೆ ಚಿಕಿತ್ಸೆಯನ್ನು ನೀಡುತ್ತಿರುವ ಬಗ್ಗೆ ಮೇಲ್ವಿಚಾರಣೆ / ಕಾರ್ಯಚರಣೆ ವೇಳೆ ದಾಖಲೆ ಸಹಿತ ಕಂಡು ಬಂದಿದೆ.
ದಿನಾಂಕ: 06-03-2021 ರಿಂದ 08-03-2021 ರವರೆಗೆ ಶ್ರೀಮತಿ ಅಪ್ಪಿ ತಿ/o ಮಾಧವ ಇವರು ಸದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದು, ಕೋವಿಡ್ ಪರೀಕ್ಷೆಯನ್ನು ನಡೆಸದೆ ರೋಗಿಯನ್ನು ಚಿಕಿತ್ಸೆಯ ಬಗ್ಗೆ ನಿರ್ಲಕ್ಷ್ಯತೆಯನ್ನು ತೋರಿಸಿದ್ದು, ದಿ: 18-03-2021 ರಂದು ಕೋವಿಡ್ ಮರಣವನ್ನು ಹೊಂದಿರುತ್ತಾರೆ.
ಅವರಿಗೆ ಚಿಕಿತ್ಸೆ ನೀಡಿರುವ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದಾಗ ರೋಗಿಯ ಚಿಕಿತ್ಸೆಯ ಬಗ್ಗೆ ಸಂಪೂರ್ಣ ವೈದ್ಯಕೀಯ ನಿರ್ಲಕ್ಷ್ಯ ತೋರಿಸಿರುವುದು ಕಂಡುಬಂದಿದೆ. ಆಯುರ್ವೇದ ವೈದ್ಯರು ಅಲೋಪತಿ ಪದ್ದತಿಯಲ್ಲಿ ಚಿಕಿತ್ಸೆಯನ್ನು ನೀಡುತ್ತಿರುವುದು ಅಲ್ಲದೆ ಮಿಸ್ಕಿತ್ ಆಸ್ಪತ್ರೆಯ ಆವರಣದಲ್ಲಿ ಕೆ.ಪಿ.ಎಂ.ಇ.ಎ ನೋಂದಾಣಿ ಇಲ್ಲದೆ ಕ್ಲಿನಿಕ್ ನಡೆಸುತ್ತಿರುವುದು ಮೇಲ್ವಿಚಾರಣೆ ಮೇಲೆ ಕಂಡು ಬಂದಿದೆ.
ಪ್ರಸ್ತುತ ಕಾರ್ಯಚಾರಣೆ ಸಂಧರ್ಭದಲ್ಲಿ ಆಸ್ಪತ್ರೆಯಲ್ಲಿ ಒಟ್ಟು 18 ರೋಗಿಗಳನ್ನು ದಾಖಲು ಮಾಡಲಾಗಿದ್ದು, ರೋಗಿಗಳ ಕೇಸ್ಶೀಟ್ ಪರೀಶೀಲಿಸಿದಾಗ ಕೇವಲ 9 ಮಂದಿಯನ್ನು ಮಾತ್ರ ಅಧೀಕೃತವಾಗಿ ದಾಖಲಾತಿ ಮಾಡಿರುತ್ತಾರೆ. ಉಳಿದ 4 ಮಂದಿಯಲ್ಲಿ ಜ್ವರದ ಪ್ರಕರಣಗಳು ಇದ್ದು, eಠಿiಜemiಛಿ ಕಾಯ್ಡೆಯನ್ನು ಅನುಸರಿಸದೆ ಉಲ್ಲಂಘನೆ ಮಾಡಿರುತ್ತಾರೆ. ದಿನಾಂಕ: 23-04-2021 ರಂದು (ಮಾನ್ಯ ಜಿಲ್ಲಾಧಿಕಾರಿಯವರ) ಕೆ.ಪಿ.ಎಂ.ಇ.ಎ ಕಾಯ್ದೆ ಸಕ್ಷಮ ಪ್ರಾಧಿಕಾರಿ/ ಮಾನ್ಯ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಕೆ.ಪಿ.ಎಂ.ಇ.ಎ ಕಾಯ್ದೆಯನ್ನು ಸಂಪೂರ್ಣ ಉಲ್ಲಂಘನೆಯಾದ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಚರಣೆಯನ್ನು ನಡೆಸಿ ಆಸ್ಪತ್ರೆಯ ಕೆ.ಪಿ.ಎಂ.ಇ.ಎ. ನೋಂದಾವಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದ್ದು, ಆಸ್ಪತ್ರೆಯನ್ನು ಮುಚ್ಚಲಾಗಿದೆ.
ಕಾರ್ಯಚರಣೆಯ ತಂಡದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ|| ದೀಪಾ ಪ್ರಭು, ತಾಲೂಕು ಆರೋಗ್ಯಾಧಿಕಾರಿ ಡಾ|| ಸುಜಯ್ ಕುಮಾರ್, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ತಜ್ಞ ವೈದ್ಯರು ಡಾ|| ರೆಹೆಮಾನ್, ಜಿಲ್ಲಾ ಆಯುಷ್ ಅಧಿಕಾರಿ ಡಾ|| ಆಶ್ಫಕ್ , ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳಿಪಾಡಿ, ಕೆ.ಪಿ.ಎಂ.ಇ.ಎ ಕಾಯ್ಡೆಯ ಕಾನೂನು ಸಲಹೆಗಾರರಾದ ಚಂದ್ರಹಾಸ್, ಶುಶ್ರೂಷಾಧಿಕಾರಿ ಗುಲ್ಜಾರು ಬಾನು, ಛಾಯಾಗಾರರಾದ ಆರ್.ಕೆ.ಭಟ್ ಹಾಗೂ ಪೋಲಿಸ್ ಇಲಾಖೆ ಸಿಬ್ಬಂದಿಗಳು ಕಾರ್ಯಚಾರಣೆಯಲ್ಲಿ ಭಾಗವಹಿಸಿದರು ಎಂದು ಜಿಲ್ಲಾ ಕೆ.ಪಿ.ಎಂ.ಇ.ಎ. ಸಕ್ಷಮ ಪ್ರಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.