ಸೊಹಾರ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ಇದರ ಸೊಹಾರ್ ಝೋನ್ ಅಧೀನದಲ್ಲಿರುವ ಫಲಜ್ ಸೆಕ್ಟರ್ ಸಮ್ಮೇಳನವು ಸಲ್ಲಾನ್ ಫಾರ್ಮ್ ಹೌಸ್ ನಲ್ಲಿ ನಡೆಯಿತು.
ಸಂಜೆ ಸಮಯ ನಾಲ್ಕರಿಂದ ಮಕ್ಕಳಿಗೆ ಹಾಗೂ ಕಾರ್ಯಕರ್ತರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಮಗ್ರಿಬ್ ನಮಾಝಿನ ನಂತರ ನಡೆದ ರಮಳಾನ್ ಪೂರ್ವ ಸಿದ್ದತಾ ಕಾರ್ಯಕ್ರಮದಲ್ಲಿ ಇಕ್ಬಾಲ್ ಮದನಿ ಚೆನ್ನಾರ್ ರವರು ರಮಳಾನಿನ ಸಿದ್ದತೆಯ ಕುರಿತು ರಮಳಾನಿನ ಸಮಯದಲ್ಲಿ ಮಾಡಬೇಕಾದ ಕರ್ಮಗಳ ಬಗ್ಗೆ ಸೇರಿದವರಿಗೆ ಸವಿಸ್ಥಾರವಾಗಿ ವಿವರಿಸಿದರು.
ಸಮಯ ರಾತ್ರಿ 9 ಗಂಟೆಗೆ ಸೆಕ್ಟರ್ ಸಮ್ಮೇಳನ ಹಾಗೂ ಸಮರೋಪ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸೆಕ್ಟರ್ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಅಬ್ಬಾಸ್ ರವರು ಅಧ್ಯಕ್ಷತೆಯನ್ನು ವಹಿಸಿದರು. ನಿಹಾದ್ ಅಬ್ದುಲ್ ರಜಾಕ್ ಕಿರಾಅತ್ ಪಡಿಸಿದರು. ಕೆಸಿಎಫ್ ಸೊಹಾರ್ ಝೋನ್ ಅಧ್ಯಕ್ಷರಾದ ಉಮರ್ ಫಾರೂಕ್ ಕುಕ್ಕಾಜೆಯವರು ಕಾರ್ಯಕ್ರಮವನ್ನು ಉಧ್ಘಾಟಿಸಿದರು.
ಕೆಸಿಎಫ್ ಒಮಾನ್ ಇಹ್ಸಾನ್ ಒರ್ಘನೈಝರ್ ಕಲಂದರ್ ಬಾವ ಪರಪ್ಪು ಇವರು ದಶವಾರ್ಷಿಕದ ಸಂಭ್ರಮದಲ್ಲಿರುವ ಕೆಸಿಎಫ್ ಮಾಡಿದ ಸಾಧನೆಗಳು, ಸಮಾಜದಲ್ಲಿ ಗುರುತಿಸಡಬೇಕಾದ ಹತ್ತು ಹಲವು ಯೋಜನೆಗಳ ಕುರಿತು ಹಾಗೂ ಕೆಸಿಎಫ್ ಕನ್ನಡಿಗರಿಗಾಗಿ ಮಾಡುವ ಸಾಂತ್ವನ ಯೋಜನೆಗಳು, ಡಿಸೇನಿಯಂ ಸಮ್ಮೇಳನದ ಭಾಗವಾಗಿ ನಡೆಸಿಕೊಡುವ ಯೋಜನೆಗಳ ಬಗ್ಗೆ ಸವಿಸ್ಥಾರವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತುಗಳನ್ನಾಡಿದ ಒಮಾನ್ ಬಂಟ್ಸ್ ಸಂಘದ ಸದಸ್ಯರಾದ ಅಶೋಕ್ ಶೆಟ್ಟಿಯವರು ಕೆಸಿಎಫ್ ದಶವಾರ್ಷಿಕ ಸಮ್ಮೇಳನಕ್ಕೆ ಶುಭಹಾರೈಸಿ, ತಮ್ಮ ಅನುಭವ ಮಾತುಗಳೊಂದಿಗೆ ಕೆಲವು ಕೆಸಿಎಫ್ ಸದಸ್ಯರ ವ್ಯಕ್ತಿನಡತೆಯ ಬಗ್ಗೆ ಕಂಡಂತಹ ಗುಣಗಳನ್ನು ವಿವರಿಸಿ ಕೆಸಿಎಫ್ ಕಲಿಸುವ ನಡತೆಯ ಬಗ್ಗೆ ಪ್ರಶಂಸಿದರು. ತಮ್ಮ ಎಲ್ಲಾ ವಿಧದ ಸಹಕಾರದೊಂದಿಗೆ ಸೌಹಾರ್ಧತೆಯೊಂದಿಗೆ ಒಂದಾಗಿ ಕೆಸಿಎಫ್ ನಲ್ಲಿ ಕಾರ್ಯಾಚರಿಸುವ ಎಂದು ಭರವಸೆಯ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಬಂದಂತಹ ರಫೀಕ್ ಚೆನ್ಯೈ, ಅಶೋಕ್ ಶೆಟ್ಟಿ ಮುಂತಾದವರನ್ನು ಗುರಿತಿಸಿ ಸನ್ಮಾನಿಸಲಾಯಿತು. ಹಾಗೂ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ಹಿರಿಯರಿಗೆ ಬಹುಮಾನವನ್ನು ನೀಡಲಾಯಿತು. ಪ್ರವಾಸಿ ಜೀವನಕ್ಕೆ ವಿದಾಯ ಹೇಳಿ ಊರಿಗೆ ತೆರಳುತ್ತಿರುವ ಕೆಸಿಎಫ್ ಸೊಹಾರ್ ಝೋನ್ ಸದಸ್ಯರಾದ ತಸ್ಲೀಮ್ ಎರ್ಮಾಳ್ ಇವರನ್ನು ಆತ್ಮೀಯವಾಗಿ ಬೀಳ್ಕೋಡಲಾಯಿತು
ಕಾರ್ಯಕ್ರಮದಲ್ಲಿ ಡಾ. ಅಬ್ದುಲ್ ರಜಾಕ್, ಅಝೀಝ್ ಉಪ್ಪಳ,ಅಲಿ ಇಮಾಮಿ ಉಪ್ಪಳ, ಕೆಸಿಎಫ್ ಒಮಾನ್ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಇಹ್ಸಾನ್ ವಿಭಾಗದ ಅಧ್ಯಕ್ಷರಾದ ಇಕ್ಬಾಲ್ ಎರ್ಮಾಳ್, ಝೋನ್ ಕಾರ್ಯದರ್ಶಿ ಮುಬೀನ್ ಜೋಕಟ್ಟೆ, ಹಾಗೂ ಝೋನ್, ಸೆಕ್ಟರ್ ನಾಯಕರು, ಇನ್ನಿತರು ಉಪಸ್ಥಿತರಿದ್ದರು.
ಕೆಸಿಎಫ್ ಒಮಾನ್ ಆಡಳಿತ ವಿಭಾಗದ ಕಾರ್ಯದರ್ಶಿ ಅಶ್ರಫ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿ, ಕೆಸಿಎಫ್ ಫಲಜ್ ಸೆಕ್ಟರ್ ಅಧ್ಯಕ್ಷ ಶಫೀಕ್ ಎಲಿಮಲೆ ಸ್ವಾಗತಿಸಿ, ಕನ್ವೀನರ್ ಮುನೀರ್ ಕುತ್ತಾರ್ ರವರು ವಂಧಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.