ತಿರುವನಂತಪುರಂ (www.vknews.in) : ಕಾಂಗ್ರೆಸ್ಗೆ ಮತ್ತೊಂದು ಹಿನ್ನಡೆಯಾಗಿದೆ. ಕರುಣಾಕರನ್ ಪುತ್ರಿ ಪದ್ಮಜಾ ವೇಣುಗೋಪಾಲ್ ಬಳಿಕ ಕೆ. ಕರುಣಾಕರನ್ ಅವರ ಆಪ್ತರೂ ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ. ತಿರುವನಂತಪುರಂ ಮುನ್ಸಿಪಾಲಿಟಿಯ ಮಾಜಿ ವಿಪಕ್ಷ ನಾಯಕ ಮಹೇಶ್ವರನ್ ನಾಯರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಹೇಶ್ವರನ್ ನಾಯರ್ ಕೆಪಿಸಿಸಿ ಕಾರ್ಯಕಾರಿ ಸದಸ್ಯರಾಗಿದ್ದರು.
ಪದ್ಮಜಾ ವೇಣುಗೋಪಾಲ್ ಮತ್ತು ಪದ್ಮಿನಿ ಥಾಮಸ್ ನಂತರ ಮಹೇಶ್ವರನ್ ನಾಯರ್ ಪಕ್ಷ ಬದಲಿಸಿರುವುದು ಕಾಂಗ್ರೆಸ್ ಗೆ ಮತ್ತೊಂದು ಹೊಡೆತವಾಗಿದೆ. ಕ್ರೀಡಾ ತಾರೆಯೂ ಆಗಿದ್ದ ಪದ್ಮಿನಿ ಥಾಮಸ್ ಕಾಂಗ್ರೆಸ್ ಜೊತೆಗಿನ ಸುದೀರ್ಘ ಒಡನಾಟವನ್ನು ಕೊನೆಗೊಳಿಸಿ ಬಿಜೆಪಿ ಸೇರಿದ್ದಾರೆ. ತಿರುವನಂತಪುರ ಡಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ತಂಬನೂರು ಸತೀಶ್ ಅವರು ಪದ್ಮಿನಿ ಥಾಮಸ್ ಅವರೊಂದಿಗೆ ಬಿಜೆಪಿ ಸೇರಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.