(www.vknews.com) : ದಿನಾಂಕ 27 – 06 – 2021 ರಂದು ಆನ್ಲೈನ್ ಮಾಧ್ಯಮದ ಮೂಲಕ ಕರ್ನಾಟಕದಲ್ಲಿ ಜೈನ ಧರ್ಮ ಫೇಸ್ಬುಕ್ ಬಳಗ ಮತ್ತು ಭಾರತೀಯ ಜೈನ್ ಮಿಲನ್ ವಲಯ 8 ಜಂಟಿಯಾಗಿ ಆಯೋಜಿಸಿರುವ ಚಿಣ್ಣರ ಜಿನ ಭಜನಾ ಸ್ಪರ್ಧೆ – ಸೀಸನ್ – 2 ರ ಉದ್ಘಾಟನಾ ಮತ್ತು ಲಾಂಛನ ಲೋಕಾರ್ಪnಣಾ ಸಮಾರಂಭ ಕರ್ನಾಟಕದಲ್ಲಿ ಜೈನ ಧರ್ಮ ಫೇಸ್ಬುಕ್ ನಲ್ಲಿ ನಡೆಯಿತು.
ಚಿಣ್ಣರ ಜಿನ ಭಜನಾ ಎರಡರ ಉದ್ಘಾಟನೆಯನ್ನು ನೆರವೇರಿಸಿದ ಪರಮಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಶ್ರೀಕ್ಷೇತ್ರ ಹೊಂಬುಜ ಇವರು ಆಶೀರ್ವದಿಸುತ್ತಾ ಜಿನ ಭಜನೆಯ ಪರಂಪರೆಯು ಮಕ್ಕಳಿಂದಲೇ ಬೆಳೆದು ಮಕ್ಕಳಿಂದಲೇ ಉಳಿದು ಜಿನ ಧರ್ಮದ ಪ್ರಭಾವನೆ ನಿರಂತರವಾಗಿ ಸಾಗುತ್ತಿರಲಿ ಎಂದು ಆಶಯ ವ್ಯಕ್ತಪಡಿಸಿದರು.
ಲೋಗೋ ಲೋಕಾರ್ಪಣೆ ಮಾಡಿದ ಭಾರತೀಯ ಜೈನ್ ಮಿಲನ್ ದೆಹಲಿ ಇದರ ಕಾರ್ಯಾಧ್ಯಕ್ಷರಾದ ಧರ್ಮಸ್ಥಳದ ಡಿ ಸುರೇಂದ್ರ ಕುಮಾರ್ ಅವರು ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವ ನಿಟ್ಟಿನಲ್ಲಿ ಈ ಜಿನ ಭಜನೆಯು ಸಹಕಾರಿಯಾಗಲಿದೆ ಹಾಗೂ ಇದು ನಿರಂತರವಾಗಿ ಇರಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಧರ್ಮಸ್ಥಳದ ಅನಿತಾ ಸುರೇಂದ್ರಕುಮಾರ್ ಇವರು ಮಾತನಾಡುತ್ತಾ ಕರ್ನಾಟಕದಲ್ಲಿ ಜೈನಧರ್ಮ ಫೇಸ್ಬುಕ್ ಬಳಗ ಹಾಗೂ ಭಾರತೀಯ ಜೈನ್ ಮಿಲನ್ ವಲಯ 8 ಈ ಎರಡರ ಕಾರ್ಯಕರ್ತರನ್ನು ಅಭಿನಂದಿಸುತ್ತ ನಿಮ್ಮ ಕೆಲಸ ಯಶಸ್ವಿಯಾಗಿ ಸಾಗಿ ಜಿನಧರ್ಮದ ಅಭಿವೃದ್ಧಿ ಸದಾಕಾಲ ಆಗುತ್ತಿರಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಸಮಾರಂಭವನ್ನುದ್ದೇಶಿಸಿ ಭಾರತೀಯ ಜೈನ್ ಮಿಲನ್ ವಲಯ 8 ರ ಸಂಯೋಜಕರಾದ ಭರತೇಶ್ ಜಗ ಶೆಟ್ಟಿ, ಯುವರಾಜ್ ಭಂಡಾರಿ, ಸುದರ್ಶನ್ ಜೈನ್ ಬಂಟ್ವಾಳ, ಜೀವಂಧರ್ ಕುಮಾರ್, ಮಹಾವೀರ್ ಶಹಪೂರ್, ಪಿ ಅಜಿತ್ ಕುಮಾರ್ ಜೈನ ಬೆಂಗಳೂರು, ಪಿ ದೇವಕುಮಾರ್ ಕಂಬಳಿ ದುಬೈ, ಕರ್ನಾಟಕದಲ್ಲಿ ಜೈನಧರ್ಮ ಫೇಸ್ಬುಕ್ ಬಳಗದ ಚಿತ್ತಾ ಜಿನೆಂದ್ರ ಇವರು ಮಾತನಾಡುತ್ತಾ ಚಿಣ್ಣರ ಜಿನ ಭಜನಾ ಸ್ಪರ್ಧೆ ಯಶಸ್ವಿಯಾಗಲಿ ಎಂದು ಶುಭ ಹಾರೈಕೆಯನ್ನು ಮಾಡಿದರು.
ಸಮಾರಂಭದಲ್ಲಿ ವೀರ್ ಪುಷ್ಪರಾಜ್ ಜೈನ್ ಮಂಗಳೂರು, ಶೃದ್ಧಾ ಜೈನ್ ಬೆಂಗಳೂರು, ಶ್ರುತ ಮಂಗಳೂರು, ಸೋನಿಯಾ ಯಶೋವರ್ಮ ಉಜಿರೆ, ಪ್ರಸನ್ನಕುಮಾರ್ ಮೈಸೂರು, ಪ್ರಸನ್ನ ಕುಮಾರ್ ಉಡುಪಿ, ಭಾರತೀಯ ಜೈನ್ ಮಿಲನ್ ವಲಯ 8 ರ ಪದಾಧಿಕಾರಿಗಳು, ಕರ್ನಾಟಕದಲ್ಲಿ ಜೈನಧರ್ಮ ಫೇಸ್ಬುಕ್ ಬಳಗದ ಸದಸ್ಯರು, ಸುಹಾಸ್ತಿ ಯುವ ಜೈನ್ ಮಿಲನ್ ಪದಾಧಿಕಾರಿಗಳು, ಇಂಟರ್ ನ್ಯಾಷನಲ್ ಫ್ರೆಂಡ್ಸ್ ಗ್ರೂಪಿನ ಸಂಯೋಜಕರು ಹಾಜರಿದ್ದರು.
ನಿರಂಜನ್ ಜೈನ್ ಕುದ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಸೌಜನ್ಯ ಎಸ್ ಜೈನ್ ವಿಟ್ಲ ಮಂಗಲಾಚರಣೆ ಹಾಡಿದರು. ವಜ್ರ ಕುಮಾರ್ ಜೈನ್ ಅವರು ಸ್ವಾಗತಿಸಿದರು. ಮಹಾವೀರ್ ಪ್ರಸಾದ್ ಹೊರನಾಡು ಇವರು ಪ್ರಸ್ತಾವನೆಗೈದರು. ವಿಲಾಸ್ ಪಾಸಣ್ಣನವರ್ ಧನ್ಯವಾದ ಸಮರ್ಪಿಸಿದರು.
#ನಿರಂಜನ್ ಜೈನ್ ಕುದ್ಯಾಡಿ
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.