ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಕೇಂದ್ರ ಬಜೆಟ್ನಲ್ಲಿ ಸಹಕಾರ ಸಂಘಗಳ ತೆರಿಗೆಯನ್ನು ಕೇಂದ್ರ ಸರ್ಕಾರ ಶೇ .೧೮ ರಿಂದ ಶೇ .೧೫ ಕ್ಕೆ ಇಳಿಕೆ ಮಾಡಿದ್ದು , ಜತೆಗೆ ೧ ಕೋಟಿಗಿಂತ ಹೆಚ್ಚು ಹಾಗೂ ೧೦ ಕೋಟಿವರೆಗಿನ ಆದಾಯ ಹೊಂದಿರುವ ಸಂಘಗಳ ಸರ್ಚಾರ್ಜ್ಅನ್ನು ಶೇ .೧೨ ರಿಂದ ೭ ಕ್ಕೆ ಇಳಿಕೆ ಮಾಡಿದ್ದು , ಸ್ವಾಗತಾರ್ಹ ಆದರೆ ಸಂಪೂರ್ಣವಾಗಿ ತೆಗೆದು ಹಾಕಬೇಕಾಗಿತ್ತು ಎಂದು ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟಿದ್ದಾರೆ.
ನದಿಗಳ ಜೋಡಣೆಯಿಂದ ರೈತರಿಗೆ ಅನುಕೂಲ ಮತ್ತು ಕೃಷಿ , ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಅವರು , ಕೃಷಿ ಅಭಿವೃದ್ಧಿಗೆ ಪೂರಕವಾಗಿ ರೈತರಿಗೆ ನೀಡುವ ಸಾಲವನ್ನು ಶೂನ್ಯಬಡ್ಡಿಯಲ್ಲಿ ನೀಡಲು ಕ್ರಮವಹಿಸಬೇಕಾಗಿತ್ತು ಎಂದಿದ್ದಾರೆ.
ಬಜೆಟ್ ಕುರಿತು ಕಾಂಗ್ರೆಸ್ ಪ್ರತಿಕ್ರಿಯೆ ಕೇಂದ್ರ ಬಜೆಟ್ ಕುರಿತು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಎಂ.ಎಲ್. ಅನಿಲ್ಕುಮಾರ್ ಪ್ರತಿಕ್ರಿಯಿಸಿ , ಜನರ ನಿರೀಕ್ಷೆ ಹುಸಿಯಾಗಿದೆ , ರಾಜ್ಯದ ಕಡೆಗಣನೆ ಮಾತ್ರವಲ್ಲ , ಕೋಲಾರ ಜಿಲ್ಲೆಯನ್ನು ಮರೆಯಲಾಗಿದೆ. ಕೋಲಾರದ ರೈಲ್ವೆ ಕೋಚ್ ಕಾರ್ಖಾನೆ ಪ್ರಸ್ತಾಪವೂ ಇಲ್ಲ , ಇದರ ಬದಲಿಗೆ ರೈಲ್ವೆ ವರ್ಕ್ಶಾಪ್ ಸ್ಥಾಪನೆಯ ಮಾತು ಎಲ್ಲಿ ಕೇಳಿ ಬಂದಿಲ್ಲ ಇದು ರೈತರು , ಮಹಿಳೆಯರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಅಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಜೆಡಿಎಸ್ ಜಿಲ್ಲಾಧ್ಯಕ್ಷರಿಂದ ಬಜೆಟ್ಗೆ ಪ್ರತಿಕ್ರಿಯೆ ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ. ವೆಂಕಟಶಿವಾರೆಡ್ಡಿ , ಎಲ್ಲರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ . ಇದು ಚುನಾವಣಾ ಪೂರ್ವ ಬಜೆಟ್ ಆಗಿದ್ದು , ಬ್ಯಾಲೆನ್ಸ್ ಮಾಡಿದ್ದಾರೆ , ರೈತರಿಗೂ ನೆರವಾಗಿದ್ದಾರೆ , ಆದರೆ ರಾಜ್ಯಕ್ಕೆ ಹೆಚ್ಚಿನ ಯೋಜನೆಗಳನ್ನು ಕೊಟ್ಟಿಲ್ಲ , ಬಜೆಟ್ನಲ್ಲಿ ರಾಜ್ಯದ ಕಡೆಗಣನೆ ಕಂಡು ಬರುತ್ತಿದೆ , ಜನರ ನಿರೀಕ್ಷೆಯಷ್ಟು ಕಾರ್ಯಕ್ರಮಗಳನ್ನು ನೀಡಲು ವಿಫಲವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ .
ಕೆಯುಡಿದ ಅಧ್ಯಕ್ಷರಿಂದ ಬಜೆಟ್ಗೆ ಸ್ವಾಗತ ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ , ಜನಸ್ನೇಹಿ ಬಜೆಟ್ , ಮಧ್ಯಮ ವರ್ಗದವರು ಉಸಿರಾಡುವಂತಾಗಿದೆ . ತೆರಿಗೆ ಪಾವತಿಗೆ ೨ ವರ್ಷ ಅವಧಿ ವಿಸ್ತರಣೆ ಶುಭ ಸುದ್ದಿ , ಜನ ತಮ್ಮ ಸಂಪಾದನೆಯನ್ನು ಪಾರದರ್ಶಕವಾಗಿಟ್ಟುಕೊಳ್ಳಲು ಸಹಕಾರಿಯಾಗಲಿದೆ . ಇದೊಂದು ಜನಪರವಾದ ಬಜೆಟ್ ಆಗಿದೆ ಎಂದು ಪ್ರಧಾನಿ ಮೋದಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.