(ವಿಶ್ವ ಕನ್ನಡಿಗ ನ್ಯೂಸ್) : ಅಡ್ಡೂರು ಆಟೋ ಚಾಲಕರ ಮಾಲಕರ ಸಂಘದಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು ಮತ್ತು ಸನ್ಮಾನ್ಯ ಕಾರ್ಯಕ್ರಮ ಆಯೋಜಿಸಲಾಯಿತು. ಯುಪಿ ಇಬ್ರಾಹಿಂ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಆಂಬುಲೆನ್ಸ್ ಚಾಲಕರಾದ ಹಬೀಬ್ ಸಲ್ಲಾಜೆ ಅವರಿಗೆ ಅಧ್ಯಕ್ಷರಾದ ಜಲೀಲ್ ಅವರು ಶಾಲುವೊದಿಸಿ ಸನ್ಮಾನ ಮಾಡಿದರು.
ಹಬೀಬ್ ಸಲ್ಲಾಜೆ; ಅಡ್ಡೂರು ಮತ್ತು ಆಸುಪಾಸಿನ ಗ್ರಾಮಗಳ ರೋಗಿಗಳಿಗೆ ಹಗಲು ರಾತ್ರಿ ಎನ್ನದೆ ಆಕ್ಸಿಜನ್, ಔಷಧಿ ಮತ್ತು ಇತರ ಅಗತ್ಯ ಸೇವೆಯನ್ನು ಹಾಗೂ ರೋಗಿಗಳನ್ನು ತುರ್ತು ಸಮಯದಲ್ಲಿ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸಿ ಊರವರ ಮೆಚ್ಚುಗೆಗಳಿಸಿದ ವ್ಯಕ್ತಿಯಾಗಿದ್ದಾರೆ. ಇವರ ಮಹೋನ್ನತ ಸೇವೆ, ಅಂತ್ಯವಿಲ್ಲದ ಕೊಡುಗೆ, ನಿದ್ದೆಯಿಲ್ಲದ ರಾತ್ರಿಗಳ ಅನಂತ ತ್ಯಾಗ, ಪರಿಶ್ರಮ ಸೇವೆ, ಪರೋಪಕಾರಿ, ಕೊಡುಗೆ ಮತ್ತು ಸಮಾಜ ಸೇವೆಯಲ್ಲಿನ ಅದ್ಭುತ ಸಾಧನೆಗಳಿಗಾಗಿ ಸ್ವಾತಂತ್ರ್ಯ ಉತ್ಸವ ಕಾರ್ಯಕ್ರಮದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.