(www.vknews.com) : “ರಕ್ಷಾ ಹೆಲ್ಪ್ ಲೈನ್ಸ್” ಸಂಸ್ಥಾಪಕ, ಅಬ್ದುಲ್ ರಝಾಕ್ ಉಜಿರೆ. ಬೆಳ್ತಂಗಡಿಯ ತೀರಾ ಹತ್ತಿರ ಉಜಿರೆ ಎಂಬ ಊರಿದೆ. ಅಲ್ಲಿನ ಒಂದು ಗ್ರಾಮ ನಿವಾಸಿ..
“ ಅಬ್ದುಲ್ ರಝಾಕ್ , ಉಜಿರೆ”. ಇವರು ಕಳೆದ 13 ವರ್ಷಗಳಿಂದ ಯು.ಎ.ಇ. ಯಲ್ಲಿ ಒಂದು ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಉತ್ತಮ ವೇತನದ ಜೊತೆಗೆ ಕಂಪೆನಿಯು ಎಲ್ಲಾ ತರಹದ ಸೌಲಭ್ಯಗಳನ್ನು ಇವರಿಗೆ ನೀಡಿದೆ.
ಇವರು ಸಮಾಜ ಸೇವೆಯಲ್ಲಿ ಎತ್ತಿದ ಕೈ. ದುಬೈಯಲ್ಲಿದ್ದು “ರಕ್ಷಾ ಹೆಲ್ಫ್ ಲೈನ್” ಹೆಸರಿನ ಗ್ರೂಪನ್ನು ರಚಿಸಿ ತನ್ನ ಸೇವೆಯನ್ನು ಇನ್ನಷ್ಟು ವಿಸ್ತಾರಗೊಳಿಸಿದರು. ವಿಶೇಷವಾಗಿ ಕೋವಿಡ್ ಸಂಧರ್ಭದಲ್ಲಿ ಹತ್ತು ಹಲವು ಸಂಕಷ್ಟಗಳನ್ನು ಎದುರಿಸುವವರಿಗೆ ಇವರು ನೀಡಿದಂತಹ ಸೇವೆ ವರ್ಣನಾತೀತ.
ತಮ್ಮ ಸೇವೆಯನ್ನು ಅಲ್ಲಾಹನಲ್ಲದೇ ಇತರರು ಗುರುತಿಸಬೇಕು ಎಂಬ ನಿಯ್ಯತನ್ನು ಖಂಡಿತ ಹೊಂದಿದವರಾಗಿರಲಿಲ್ಲ. ಈ ಕರ್ಮ ನಿಷ್ಠೆಯೇ ಇವರನ್ನು ಇಂದು ಇಡೀ ವಿಶ್ವವೇ ಗುರುತಿಸುವಂತೆ ಮಾಡಿದೆ.
ಗಲ್ಫ್ ನಾಡಿನಾದ್ಯಂತ ಅತೀ ಹೆಚ್ಚು ಪ್ರಸಾರವಾಗುತ್ತಿರುವ ಪತ್ರಿಕೆ “ಗಲ್ಫ್ ನ್ಯೂಸ್”. ಇದರಲ್ಲಿ ಇವರ ಸೇವೆಗಳ ಬಗ್ಗೆ (23-12-2020) ಅತೀ ವಿಸ್ತಾರವಾಗಿ ಪ್ರಶಂಸೆಯನ್ನು ವ್ಯಕ್ತಪಡಿಸಿರುವುದು ಕನ್ನಡಿಗರಾದ ನಮ್ಮೆಲ್ಲರಿಗೂ ತುಂಬಾ ಸಂತೋಷವನ್ನು ನೀಡಿದೆ. ನಾಡಿನ ಹಲವಾರು ಪತ್ರಿಕೆಗಳು, ಆನ್ ಲೈನ್ ಪತ್ರಿಕೆಗಳು ಇವರ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದೆ.
ಇಂದು ಬೆಳಿಗ್ಗೆ ಸ್ವತಃ ತಾವೇ ನನ್ನನ್ನು ಸಂಪರ್ಕಿಸಿ ಮಾತನಾಡಿದರು. ಅವರ ಕಾರ್ಯಕ್ಷೇತ್ರಗಳ ಬಗ್ಗೆ ಕೇಳಿ ಅತೀವ ಆನಂದವಾಯಿತು. ತುಂಬಾ ಪ್ರಶಂಸೆಯ ಮಾತುಗಳನ್ನಾಡಿದೆ. ನಿಜವಾಗಿಯೂ ಅವರೊಬ್ಬ ಮಾದರೀ ವ್ಯಕ್ತಿ.
ಅಲ್ಲಾಹು ಅವರ ಈ ಸೇವೆಯನ್ನು ಕುಬೂಲ್ ಮಾಡಿ, ಅವರಿಗೂ, ಜೊತೆಗಿರುವ ಎಲ್ಲಾ ಸಹೋದರರಿಗೂ ಆರೋಗ್ಯವನ್ನು, ಧೀರ್ಘಾಯುಷ್ಯವನ್ನು ಎಲ್ಲಾ ತರಹದ ಬರ್ಕತನ್ನು ನೀಡಿ ಅನುಗ್ರಹಿಸಲಿ. ಇನ್ನಷ್ಟು ಸೇವೆಯನ್ನು ಮಾಡುವ ತೌಫೀಕ್ ಅವರಿಗೆ ನೀಡಲಿ.(ಆಮೀನ್).
ಮೌಲಾನಾ ಅಬ್ದುಲ್ ಹಫೀಝ್ , ಅಲ್ ಕಾಸಿಮೀ, ಕಾರ್ಕಳ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.