ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ವೆಂಕಟೇಶಯ್ಯ , ಬಸ್ ನಿಲ್ದಾಣ ಸಾರ್ಜೆಂಟ್ ( ಓಓಡಿ ಕರವಸೂಲಿಗಾರರು ) ಪುರಸಭೆ ಶ್ರೀನಿವಾಸಪುರ ಅವರು ಸೆಪ್ಟೆಂಬರ್ 14 ರಿಂದ ಇದುವರೆಗೆ ಮುಖ್ಯಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದು , ಸರ್ಕಾರಿ ಕೆಲಸಕ್ಕೆ ಧೀರ್ಘಾವಧಿಯಿಂದ ಅನಧಿಕೃತವಾಗಿ ಗೈರು ಹಾಜರಾಗಿದ್ದರಿಂದ ನೋಟಿಸನ್ನು ಅವರ ವಿಳಾಸಕ್ಕೆ ಕಳುಹಿಸಿದರೂ ಸಹ ಅವರು ಯಾವುದೇ ಲಿಖಿತ ವಿವರಣೆ ಸಲ್ಲಿಸಿರುವುದಿಲ್ಲ.
ಆದ್ದರಿಂದ ಈ ನೋಟಿಸು ಪ್ರಕಟಗೊಂಡ 07 ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿ ಲಿಖಿತ ಸಮಜಾಯಿಷಿಯನ್ನು ನೀಡಬೇಕು . ತಪ್ಪಿದ್ದಲ್ಲಿ ನಾಗರೀಕ ಸೇವಾ ನಿಯಮ 1977 ರ ಅನ್ವಯ ಶಿಸ್ತಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಶ್ರೀನಿವಾಸಪುರ ಪುರಸಭೆಯ ಮುಖ್ಯಧಿಕಾರಿಗಳು ತಿಳಿಸಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.