ಮಲಪ್ಪುರಂ(ವಿಶ್ವಕನ್ನಡಿಗ ನ್ಯೂಸ್): ಸಮಸ್ತ ಅಧ್ಯಕ್ಷರಾದ ಜಿಫ್ರಿ ಮುತ್ತು ಕೋಯ ತಂಙಳ್ ರವರಿಗೆ ಕೊಲೆ ಬೆದರಿಕೆ ಹಾಕಿದವರ ವಿರುದ್ಧ ಸರಕಾರ ಸೂಕ್ತ ಕಾನೂನು ಕ್ರಮ ಜರುಗಿಸಬೇಕು, ನಮ್ಮ ನಡುವೆ ಸಂಘಟನಾ ಪರವಾದ ಅಭಿಪ್ರಾಯ ವ್ಯತ್ಯಾಸ ಇರಬಹುದು. ಆದರೆ ಇಂತಹ ವಿಷಯದಲ್ಲಿ ಅಕ್ರಮಿಗಳನ್ನು ಯಾರೂ ಬೆಂಬಲಿಸಬಾರದು ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಸೂಚಿಸಿದ್ದಾರೆ.
ಇಂದು ಕೇರಳದ ಮಲಪ್ಪುರಂನ ಮಅದಿನ್ ಅಕಾಡೆಮಿಯಲ್ಲಿ ನಡೆದ ಶೈಖ್ ರಿಫಾಯೀ ಆಂಡ್ ನೇರ್ಚೆ ಹಾಗೂ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಕ್ಫ್ ಬೋರ್ಡ್ ಪಿಎಸ್ ಸಿಗೆ ಬಿಟ್ಟುಕೊಡುವ ವಿರುದ್ಧ ಮಸೀದಿ ಕೇಂದ್ರಿತ ಪ್ರತಿಭಟನೆಗೆ ಮುಸ್ಲಿಂ ಲೀಗ್ ನ ಕರೆಯನ್ನು ಬಹಿರಂಗವಾಗಿ ತಿರಸ್ಕರಿಸಿದ ತಂಙಳ್ ವಿರುದ್ಧ ಲೀಗ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದು, ಅದಲ್ಲದೆ ನಿಗೂಢವಾಗಿ ಮರಣ ಹೊಂದಿದ ಚೆಂಬರಿಕ ಖಾಝಿ ಸಿಎಂ ಅಬ್ದುಲ್ಲಾ ಮುಸ್ಲಿಯಾರ್ ರವರ ಅನುಭವ ಉಂಟಾಗಲಿದೆ ಎಂಬ ಬೆದರಿಕೆ ಕರೆಗಳು ಬಂದಿರುವುದಾಗಿ ತಂಙಳ್ ರವರು ಹೇಳಿದ್ದರು.ಈ ಬಗ್ಗೆ ಪ್ರತಿಕ್ರಯಿಸಿದ ಕಾಂತಪುರಂ ಎಪಿ ಉಸ್ತಾದ್ ರವರು ಸರ್ಕಾರ ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸೈಯದ್ ಅಲೀ ಬಾಫಕಿ ತಂಙಳ್, ಬದ್ರುಸ್ಸಾದಾತ್ ಇಬ್ರಾಹಿೀಂ ಖಲೀಲ್ ಅಲ್ ಬುಖಾರಿ ತಂಙಳ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.