(ವಿಶ್ವ ಕನ್ನಡಿಗ ನ್ಯೂಸ್) : ರಾಷ್ಟ್ರಭಕ್ತ ಆರ್ ಎಸ್ ಎಸ್ ನವರನ್ನು ನಾನು ಕಂಡಿದ್ದೇನೆ, ಸೈದ್ದಾಂತಿಕವಾಗಿ ನನಗೂ ಅವರಿಗೆ ಆಗಿ ಬರುವುದಿಲ್ಲ, ಆ ಸಂಘಟನೆಯಲ್ಲಿ ದೇಶಭಕ್ತಿ ಇರುವಂತಹ ಮುಖಂಡರಿದ್ದಾರೆ ಎಂದು ಸಿಎಂ ಇಬ್ರಾಹಿಂ ಅವರು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, “ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲೂ ಉತ್ತಮ ನಾಯಕರಿದ್ದಾರೆ, ಅವರ ಜೊತೆಗೂ ನನಗೆ ಉತ್ತಮ ಒಡನಾಟವಿದೆ. ರಾಮಾ ಜೋಯಿಶರು ನನ್ನ ಆತ್ಮೀಯರಾಗಿದ್ದರು, ಆದರೆ ಅವರ ಸಿದ್ದಾಂತ ಬೇರೆ, ನನ್ನ ಸಿದ್ದಾಂತ ಬೇರೆ.
ಭಾವನಾ ದೇಶಪಾಂಡೆಯವರಿಗೆ ನಡೆದಾಡಲು ಚಪ್ಪಲಿ ಇರಲಿಲ್ಲ, ಜಗನ್ನಾಥ್ ರಾವ್ ಜೋಶಿಯವರು ನಿಧನ ಹೊಂದುವ ಸಮಯದಲ್ಲಿ ಪೂನಾ ಆಸ್ಪತ್ರೆಯ ಬಿಲ್ ಭರಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಅವರು ದೇಶಭಕ್ತರು, ಅಂತವರ ಜೊತೆ ನಾನು ಕೆಲಸ ಮಾಡಿದ್ದೇನೆ. ಹಾಗಾಗಿ ನನಗೆ ಯಾರ ಮೇಲೂ ದ್ವೇಷವಿಲ್ಲ, ನನ್ನನ್ನೂ ಯಾರೂ ದ್ವೇಷಿಸುವುದಿಲ್ಲ ಎಂದು ನಂಬಿದ್ದೇನೆ ಎಂದು ಇಬ್ರಾಹಿಂ ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.