ಪಕ್ಕಲಡ್ಕ (www.vknews.in) : ಸ್ನೇಹ ಪಬ್ಲಿಕ್ ಸ್ಕೂಲ್ ಪಕ್ಕಲಡ್ಕ ಬಜಾಲ್ ಇದರ ವತಿಯಿಂದ ೭೩ನೇ ಗಣರಾಜ್ಯೋತ್ಸವವನ್ನು ಸ್ಥಳೀಯ ಮಕ್ಕಳು, ಅಧ್ಯಾಪಕರು, ಮತ್ತು ಆಡಳಿತ ಕಮಿಟಿ ಸದಸ್ಯರು ಸೇರಿ ಸಂಕ್ಷಿಪ್ತವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಇದರ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಮುಹಮ್ಮದ್ ಪರ್ವೀಜ್, ದ್ವಜಹಾರೋಹಣ ನೆರೆವೇರಿಸಿದರು.
ನಂತರ ಮಾತನಾಡಿದ ಅವರು ” ವಿಶ್ವದಲ್ಲೇ ಅತ್ಯಂತ ಸುಂದರವಾದ ಸಂವಿಧಾನವಾಗಿದೆ ಭಾರತದ ಸಂವಿಧಾನ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಈ ಸಂವಿಧಾನವನ್ನು ಸಂರಕ್ಷಿಸುವವರು ನಾವಾಗಬೇಕು ಎಲ್ಲರು ಸಂವಿಧಾನವನ್ನು ಕಲಿಯಬೇಕು ಅರಿಯಬೇಕು ಎಂದು ವಿದ್ಯಾರ್ಥಿಗಳಿಗೆ ಹಿತ ನುಡಿದರು. ನಂತರ ಶಾಲಾ ಕರೆಸ್ಪೋನ್ಡೆಂಟ್ ಜನಾಬ್ ಯೂಸುಫ್ ಪಕ್ಕಲಡ್ಕ ರವರು ಮಾತನಾಡಿ ಭಾರತದ ಸಂವಿಧಾನ ಜಾರಿಯಾದ ಇತಿಹಾಸವನ್ನು ಮಕ್ಕಳಿಗೆ ಸಂಕ್ಷಿಪ್ತವಾಗಿ ವಿವರಿಸಿಕೊಟ್ಟರು ನಮ್ಮ ಜಾತಿ, ಧರ್ಮ ಬೇರೆ ಬೇರೆ ಆದರು ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯಿನಿ ನುಷ್ರತ್ ಖುರೇಷ್ ಸಂವಿಧಾನದ ಪೀಠಿಕೆ ಓದಿ ಪ್ರತಿಜ್ಞೆ ಮಾಡಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಅಧ್ಯಾಪಕಿಯರು ದೇಶಭಕ್ತಿ ಗೀತೆ ಹಾಡಿದರು, ವಿದ್ಯಾರ್ಥಿ ತೋಫಿಕ್ ಕಿರಾತ್ ಪಠಿಸಿದರು, ಶಿಕ್ಷಕಿ ರಮ್ಯಾ ಮೇಡಂ ಕಾರ್ಯಕ್ರಮವನ್ನು ನಿರೂಪಿಸಿದರು ರಾಷ್ಟ್ರ ಗೀತೆಯೊಂದಿಗೆ ಮುಕ್ತಾಯವಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.