(www.vknews.in) : ಹಿಜಾಬ್ ವಿಚಾರವಾಗಿ ಎಡಬಿಡಂಗಿತನದಿಂದ ಕೂಡಿದ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ವಕ್ತಾರೆ ಮಂಗಳೂರಿನ ಸುರೈಯಾ ಅಂಜುಮ್ ಒಂದೋ ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕು ಅಥವಾ ಆಕೆಯ ವಿರುದ್ದ AICCಯೋ, KPCCಯೋ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಂಟಿಯಾಗಿ ಆಗ್ರಹಿಸಿದ JDS Karnataka State Planning Council ಹಾಗೂ ಮಾರ್ದನಿ ಸಾಮಾಜಿಕ & ಸಾಹಿತ್ಯ-ವೇದಿಕೆ (MSS) ದಕ್ಷಿಣ ಭಾರತ ಮಂಡಳಿ.
ಸುರೈಯ್ಯಾ ತಾನು ಪ್ರಚಾರದ ತೆವಲಿನಿಂದ ವೀಡಿಯೋ ಹೇಳಿಕೆ ನೀಡುವ ಮುನ್ನ ಹಿಜಾಬ್ ಬಗ್ಗೆ ಕಾಂಗ್ರೆಸ್ ವರಿಷ್ಠ ಶ್ರೀ ರಾಹುಲ್ ಗಾಂಧಿ, ಮಾಜಿ ಸಿಎಂ ಶ್ರೀ ಸಿದ್ದರಾಮಯ್ಯರಂಥ ನೇತಾರರ ಸ್ಪಷ್ಠ ನಿಲುವೇನು? ಎಂಬುದನ್ನು ಮೊದಲು ಯೋಚಿಸಬೇಕಿತ್ತು.
6:55 ನಿಮಿಷಗಳ ವೀಡಿಯೋ ಹೇಳಿಕೆ ಮೂಲಕ ಅಂಜುಮ್ ತಾನು ಕಾಂಗ್ರೆಸ್’ನ ಬದಲಾಗಿ ಬಿಜೆಪಿ ಅಥವಾ ಸಂಘ ಪರಿವಾರದ ವಕ್ತಾರೆಯೋ? ಎಂಬ ಅನುಮಾನ ಮೂಡಿಸುತ್ತದೆ ಹಾಗೂ ಆಕೆ ಹಿಂದುತ್ವವಾದಿ ಮತಾಂಧ ಶಕ್ತಿಗಳನ್ನು ತೃಪ್ತಿಪಡಿಸಲು ಹೊರಟಿದ್ದಾರೆಯೋ? ಎಂಬ ಸಂದೇಹ ಮೂಡುವಂತಾಗಿದೆ. ಧಾರ್ಮಿಕ ಸೂಕ್ಷ್ಮ ವಿಚಾರದಲ್ಲಿ ಪ್ರತಿಕ್ರಿಯಿಸುವ ಮುನ್ನ ಆ ಬಗ್ಗೆ ತಿಳುವಳಿಕೆ ಹೊಂದಿರುವ ಮತಪಂಡಿತರೊಂದಿಗೆ ಆಕೆ ಮಾಹಿತಿ ಪಡೆದುಕೊಳ್ಳಬೇಕಿತ್ತು. ಕಾಂಗ್ರೆಸ್ ಮುಖಂಡರು ಕೂಡಲೇ ಆಕೆಗೆ ವಿವಾದಿತ ವಿಚಾರಗಳಲ್ಲಿ ಅನಗತ್ಯ ಹಸ್ತಕ್ಷೇಪ ನಡೆಸದಂತೆ ಹಾಗೂ ಜೇನುಗೂಡಿಗೆ ಕಲ್ಲು ಹಾಕುವಂಥ ಕೆಲಸಗಳಿಗೆ ಕೈಹಾಕದೆ ತೆಪ್ಪಗಿರುವಂತೆ ಕಿವಿಮಾತು ಹೇಳುವುದು ಒಳಿತು.
ಹಿಜಾಬ್ ನಮ್ಮ ಹಕ್ಕು ಎಂದು ಮೊದಲು ಹೇಳಿದ ನಂತರ ಆಕೆ ಆ ವಿಚಾರದಲ್ಲಿ ಜನಸಾಮಾನ್ಯರಲ್ಲಿ ಗೊಂದಲ ಮೂಡಿಸುವಂತೆ ದ್ವಂದ್ವ ಹೇಳಿಕೆ ನೀಡಿರುವುದು ಆಕ್ಷೇಪಾರ್ಹವಾದುದು. ಕಾಂಗ್ರೆಸ್ ವಕ್ತಾರೆಯು ‘ಧರ್ಮ ಮೊದಲೋ, ದೇಶ ಮೊದಲೋ’ ಎಂಬ ವಿಚಾರದಲ್ಲಿ ತಾಳಿರುವ ನಿಲುವು ಅಥವಾ ನೀಡಿರುವ ಅನವಶ್ಯಕ ಪ್ರತಿಕ್ರಿಯೆ ಹಾಗೂ ‘ಗುರುಗಳು ದೇವನಿಗೆ ಸಮಾನ’ ಎಂಬಂತೆ ಪೆದ್ದುಪೆದ್ದಾಗಿ ಬಡಬಡಿಸಿರುವುದನ್ನು ಆಕೆ ಪ್ರತಿನಿಧಿಸುವ ಸನಾತನ ಧರ್ಮ ಒಪ್ಪುವಂಥದ್ದಲ್ಲ. ಇದು ಧಾರ್ಮಿಕವಾಗಿ ಆಕೆ ಅರಿವಿನ ಕೊರತೆ ಹೊಂದಿರುವುದರ ನಿದರ್ಶನವಾಗಿದೆ. ‘ಹಿಜಾಬ್ ಪರವಾಗಿ ಧ್ವನಿ ಎತ್ತಿರುವವರಲ್ಲಿ ದೇಶಪ್ರೇಮದ ಕೊರತೆಯಿದೆ’ ಎಂಬಂತೆ ವೃಥಾರೋಪ ಮಾಡಿರುವುದು ಆಕೆಯು ಬೌದ್ದಿಕ ದಿವಾಳಿತನ ಹೊಂದಿರುವುದನ್ನೂ ಸೂಚ್ಯಪಡಿಸುತ್ತದೆ.
ತನ್ನ ರಾಜಕೀಯ ಗುರುವಾಗಿರಬಹುದಾದ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಶ್ರೀ ಯುಟಿ ಖಾದರ್ ಅವರಂತೆಯೇ ಹಿಜಾಬ್ ವಿಚಾರದಲ್ಲಿ ಆಕ್ಷೇಪಾರ್ಹ ಧೋರಣೆ ಹೊಂದಿರುವ ಕಾಂಗ್ರೆಸ್ ವಕ್ತಾರೆ ಸುರೈಯ್ಯಾ ಅಂಜುಮ್ ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕು ಅಥವಾ ಅವರ ವಿವಾದಾತ್ಮಕ ಹೇಳಿಕೆ ವಿರುದ್ದ ಎಐಸಿಸಿ (ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್) & ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ಕೂಡಲೇ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕೆಂದು JDS KSPC ಹಾಗೂ ಮಾರ್ದನಿ ಸಾಮಾಜಿಕ & ಸಾಹಿತ್ಯ-ವೇದಿಕೆ (MSS) ದಕ್ಷಿಣ ಭಾರತ ಮಂಡಳಿಗಳು ಜಂಟಿಯಾಗಿ ಆಗ್ರಹಿಸುತ್ತವೆ.
JDS KSPC & MSS South India Board ಪರವಾಗಿ ✍️ Journalist ಎ.ಕೆ. ಉಮರುಲ್ ಫಾರೂಖ್ [ಮಾರ್ದನಿ] ಬಿಕ್ಕೋಡು, ಹಾಸನ ರಾಜ್ಯ ಮುಖ್ಯ ಸಂಘಟನಾ ಸಂಚಾಲಕ, JDS KSPC (ಜಾತ್ಯತೀತ ಜನತಾದಳ ಕರ್ನಾಟಕ ರಾಜ್ಯ ಪ್ಲ್ಯಾನಿಂಗ್ ಕೌನ್ಸಿಲ್) & ಮಹಾಪ್ರಧಾನ ಕಾರ್ಯದರ್ಶಿ, ಮಾರ್ದನಿ ಸಾಮಾಜಿಕ & ಸಾಹಿತ್ಯ-ವೇದಿಕೆ (MSS) ದಕ್ಷಿಣ ಭಾರತ ಮಂಡಳಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.