ಮಂಗಳೂರು (www.vknews.in) ; ಶಿವಮೊಗ್ಗದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯನ್ನು ಅಟ್ಟಾಡಿಸಿ ವರದಿ ಮಾಡಿದ ಪತ್ರಕರ್ತನ ಕ್ರಮವು ಸಂವಿಧಾನದ ನಾಲ್ಕನೆಯ ಅಂಗವೆಂದು ಕಾಣುವ ಮಹೋನ್ನತ ಮಾಧ್ಯಮ ಕ್ಷೇತ್ರಕ್ಕೆ ಮಾಡಿದ ಅವಮಾನ ಎಂದು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಹೇಳಿದ್ದಾರೆ.
ಹಿಜಾಬ್ ಮತ್ತು ಪರ್ದಾ ಧರಿಸುವುದು ಇಸ್ಲಾಂ ಧರ್ಮದ ಶರೀಅತ್ ಕಾನೂನು ಪ್ರಕಾರ ಮುಸ್ಲಿಂ ಹುಡುಗಿಯರ ಮತ್ತು ಮಹಿಳೆಯರ ಪರಂಪರಾಗತ ಧಾರ್ಮಿಕ ಸಂಪ್ರದಾಯವಾಗಿದೆ. ಹಿಜಾಬ್ ಸಮಸ್ಯೆಯ ವಿಷಯ ವಾಗಿರದೆ ಸಹಜ ಸಂಗತಿಯಾಗಿರುವಾಗ ಇದನ್ನು ವಿವಾದ ಮಾಡಿರುವುದರ ಹಿಂದೆ ಬಹಳಷ್ಟು ಷಡ್ಯಂತ್ರ ಗಳಿವೆ. ಉಡುಪಿ ಯಿಂದ ಆರಂಭವಾದ ಹಿಜಾಬ್ ವಿವಾದದ ಬಳಿಕ ಹಿಜಾಬ್ ಧರಿಸುವುದು ತಪ್ಪು ಎಂಬಂತೆ ಮಾಧ್ಯಮಗಳೇ ಬಿಂಬಿಸುತ್ತಿವೆ. ಪ್ರಾಮಾಣಿಕತೆ, ಸತ್ಯ ಸಂಧತೆ ವಸ್ತುನಿಷ್ಠ ವರದಿಯ ಪ್ರತೀಕವಾಗಬೇಕಾದ ಮಾಧ್ಯಮಗಳು ಭಾರತದ ಮೂಲ ನಿವಾಸಿಗಳಾದ ಮುಸ್ಲಿಂ ಸಮುದಾಯವನ್ನು ಎಲ್ಲಾ ವಿಷಯಗಳಲ್ಲಿ ಕೂಡ ಅಪರಾಧಿ ಗಳೆಂಬಂತೆ ಬಿಂಬಿಸುವುದರಿಂದ ಭವಿಷ್ಯದಲ್ಲಿ ಇದು ಮಾಧ್ಯಮ ಕ್ಷೇತ್ರಕ್ಕೇ ಕಂಠಕವಾಗಿ ಪರಿಣಮಿಸಲಿದೆ.
ಯಾವುದೇ ಸಮುದಾಯವಾದರೋ ಅವರಿಗೆ ಅವರದ್ದೇ ಆದ ಆಚಾರ ವಿಚಾರಗಳಿವೆ. ಅವುಗಳ ಪಾಲನೆಗೆ ಮುಕ್ತ ಅವಕಾಶಗಳನ್ನು ಭಾರತದ ಪರಮೋಚ್ಚ ಸಂವಿಧಾನವೇ ನೀಡಿರುವಾಗ ಅದನ್ನು ಕಸಿಯುವ ಪ್ರಯತ್ನ ಮತ್ತು ಹತ್ತಿಕ್ಕುವ ಷಡ್ಯಂತ್ರ ಯಾರಿಂದ ನಡೆದರೂ ಅದನ್ನು ಸರ್ವ ಭಾರತೀಯರೂ ಒಟ್ಟಾಗಿ ವಿಫಲಗೊಳಿಸಿ ಜಗತ್ತಿಗೆ ಮಾನವೀಯತೆಯಲ್ಲಿ ಮಾದರಿಯಾಗಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.