ಟೋಲ್ ಗೇಟ್ ವಿರುದ್ಧದ ಧರಣಿ ಹನ್ನೊಂದನೇ ದಿನಕ್ಕೆ: “ಬೂಟ್ ಪಾಲಿಶ್” ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ
ಸುರತ್ಕಲ್ (www.vknews.in) : ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ವಿರುದ್ಧದ ಧರಣಿ ಗುರುವಾರವೂ ಮುಂದುವರಿದಿದೆ. ಬೆಳಿಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಹೋರಾಟಗಾರರ ಸಭೆಯಲ್ಲಿ, ಸುರತ್ಕಲ್ ಎನ್ಐಟಿಕೆ ಬಳಿ ಕಾರ್ಯಚರಿಸುತ್ತಿರುವ ಟೋಲ್ ಗೇಟ್’ ದಾಖಲೆಗಳ ಆಧಾರದಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶನದಂತೆ ಸಕ್ರಮವಾಗಿ ನಡೆಯುತ್ತಿದೆ ಆದ್ದರಿಂದ ನಿಮ್ಮ ಹೋರಾಟವನ್ನು ಕೈಬಿಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಸ್ಪಷ್ಟಪಡಿಸಿದರು.
ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಮಹಾನಗರ ಪಾಲಿಕೆಯಿಂದ ಹತ್ತು ಕಿಲೋಮೀಟರ್ ಒಳಗೆ ಟೋಲ್ ಗೇಟ್ ನಿರ್ಮಿಸುವಂತಿಲ್ಲ ಹಾಗೂ ಎರಡು ಟೋಲ್ ಗೇಟ್ ಗಳ ಮದ್ಯೆ ಅರವತ್ತು ಕಿಲೋಮೀಟರ್ ಅಂತರವಿರಬೇಕು ಅಲ್ಲದೆ ಸುರತ್ಕಲ್ ಟೋಲ್ ಗೇಟಿನಲ್ಲಿ ಯಾವುದೇ ಮೂಲಭೂತ ವ್ಯವಸ್ಥೆ ಇಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ನಿಮ್ಮ ದಾಖಲೆಗಳು 2011 ಕಿಂತ ಹಿಂದಿನ ನಿಯಮವಾಗಿದ್ದು ಇತ್ತೀಚಿನ ಹೊಸ ನಿಯಮಗಳಲ್ಲಿ ಎರಡು ಟೋಲ್ ಗೇಟ್ ಗಳ ಮಧ್ಯದ ಅಂತರವನ್ನು ಬದಲಾಯಿಸಲಾಗಿದೆ ಎಂದು ದಾಖಲೆಗಳ ಮುಖಾಂತರ ಸ ಸ್ವಷ್ಟಪಡಿಸಿದರು. ಅಲ್ಲದೆ ಸುರತ್ಕಲ್ ಟೋಲ್ ಗೇಟಿನಲ್ಲಿ ಮುಂದಿನ ಹತ್ತು ದಿನಗಳಲ್ಲಿ ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಟ್ರಕ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಸುನಿಲ್ ಡಿಸೋಜ, ಕಾರ್ಯದರ್ಶಿ ಸುಶಾಂತ್ ಶೆಟ್ಟಿ, ಸಲಹೆಗಾರರಾದ ಬಿ.ಎಸ್.ಚಂದ್ರು, ಲೀಗಲ್ ಅಡ್ವೈಸರ್ ಶತ್ಯ ಕುಮಾರ್, ಬಸ್ಸು ಚಾಲಕ-ಮಾಲಕರ ಸಂಘದ ಮಾಜಿ ಅಧ್ಯಕ್ಷ ದಿಲ್ ರಾಜ್ ಅಳ್ವ, ಪೆಡ್ರೇಷನ್ ಆಫ್ ಕರ್ನಾಟಕ ಟ್ರಕ್ ಅಸೋಸಿಯೇಷನ್ ಬೆಂಗಳೂರು ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಕುಂದಾಪುರ ಟ್ರಕ್ ಯೂನಿಯನ್ ಅಧ್ಯಕ್ಷ ಮಸೂದ್ ಇಬ್ರಾಹಿಂ ಸಾಮಾಜಿಕ ಹೋರಾಟಗಾರ ಶಶಿಧರ್ ಶೆಟ್ಟಿ ಹಾಗೂ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಉಪಸ್ಥಿತರಿದ್ದರು
ಆ ಬಳಿಕ ಧರಣಿ ಸ್ಥಳದಲ್ಲಿ ಸಭೆ ನಡೆಸಿದ ಪ್ರತಿಭಟನಾಗಾರರು, ಸರಕಾರ ಬಂಡವಾಳಶಾಹಿಗಳಿಗೆ ಬೇಕಾದಂತೆ ಕಾನೂನುಗಳನ್ನು ಬದಲಾಯಿಸುತ್ತದೆ, ಮುಂದಿನ ದಿನಗಳಲ್ಲಿ ಪ್ರತಿ ಕಿ.ಮೀ.ಗೆ ಒಂದು ಟೋಲ್ ನಿರ್ಮಿಸಿದರೂ ಅಚ್ಚರಿ ಇಲ್ಲ, ಆದ್ದರಿಂದ ರಾಜ್ಯಾದ್ಯಂತ ಟ್ರಕ್ ಯೂನಿಯನ್ ಗಳನ್ನು ಒಂದುಗೂಡಿಸಿ ಇದೇ ಸ್ಥಳದಲ್ಲಿ ಹೋರಾಟ ಮುಂದುವರಿಯುತ್ತದೆ ಎಂದು ತೀರ್ಮಾನಿಸಿದರು.
ನಮ್ಮ ಚಾಲಕರು ಟ್ರೇಡ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲೆ, ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲೆ. KSSTU ಹಾಗೂ NCTU ಉಪಾಧ್ಯಕ್ಷರು ಸಾಜೀದ್ I. G. ಹಾಗೂ ಜಿಲ್ಲೆಯ ಪ್ರಧಾನ ಕಾರ್ಯ ದರ್ಶಿ ಖಲಂದರ್, ಜಿಲ್ಲೆಯ ಖಜಾಂಜಿ ಇರ್ಷಾದ್, KSSTU ಹಾಗೂ NCTU ಬಂಟ್ವಾಳ್ ತಾಲೂಕಿನ ಅಧ್ಯಕ್ಷರು ನಿಸಾರ್ ಅಹ್ಮದ್ M. A N. ಉಪಾಧ್ಯಕ್ಷರು ರಫೀಕ್ ಶಾಮಿಲ್. ಕಾರ್ಯಕಾರಿ ಸಮಿತಿ ಸಲಾಂ ತುಂಬೆ. ಬೆಳ್ತಂಗಡಿ ತಾಲೂಕಿನ ಅಧ್ಯಕ್ಷರು ಮೂಸಾಕುಂಝಿ. ಸುಳ್ಯ ತಾಲೂಕಿನ ಖಜಾಂಜಿ ನಫ್ಸನ್, ಆಸಿಫ್ ಆಪತ್ಬಾಂಧವ ಅವರ ನೇತೃತ್ವದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಸಾಯಂಕಾಲ ನಡೆದ ಪ್ರತಿಭಟನೆಯಲ್ಲಿ ಬೂಟು ಪಾಲೀಶ್ ಮಾಡುವ ಮುಖಾಂತರ ಅಧಿಕಾರಿಗಳು ಬಂಡವಾಳಶಾಹಿಗಳ ರಾಜಕಾರಣಿಗಳ ಕೈಗೊಂಬೆಯಾಗಿದ್ದರೆ ಎಂಬ ಸಂದೇಶವನ್ನು ಅನುಕು ಪ್ರದರ್ಶನದ ಮೂಲಕ ಜನರ ಗಮನ ಸೆಳೆಯುತ್ತಾ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲಾ ಆನ್’ಲೈನ್ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸನತ್ ಕುಮಾರ್, ಉಪಾಧ್ಯಕ್ಷರು ಯತೀಶ್ ಶೆಟ್ಟಿ ಹಾಗೂ ಸದಸ್ಯರುಗಳು. ಕರ್ನಾಟಕ ಚಾಲಕರ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಚಂದ್ರ ಶೆಟ್ಟಿ, ಉಪಾಧ್ಯಕ್ಷ ಸಂದೀಪ್ ಡಿಸಿಲ್ವ, ಉಪ ಕಾರ್ಯದರ್ಶಿ ಸತೀಶ್ ಹಾಗೂ ಸದಸ್ಯರು. ಕಾರು ಚಾಲಕ-ಮಾಲಕರ ಸಂಘ ಮುಲ್ಕಿ ಅಧ್ಯಕ್ಷ ಲತೀಶ್ ಎಮ್. ಕುಂದರ್, ಮುಲ್ಕಿ ರಿಕ್ಷಾ ಚಾಲಕ ಮಾಲಕರ ಸಂಘದ ದಿನೇಶ್ ದೇವಾಡಿಗ, ಉದ್ಯಮಿ ಸಶಿಕಾಂತ್ ಶೆಟ್ಟಿ ಮುಲ್ಕಿ, ರಫೀಕ್ ನೂರಾನಿಯ, ಮಹಿಳಾ ಮಂಡಲ ಹಳೆಯಂಗಡಿ ಅಧ್ಯಕ್ಷೆ ರೇಶ್ಮಾ ಅಶ್ರಫ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾದರು.
ವರದಿ: ಅದ್ದಿ ಬೊಳ್ಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.