ಉಳ್ಳಾಲ (ವಿಶ್ವ ಕನ್ನಡಿಗ ನ್ಯೂಸ್) : ಉಳ್ಳಾಲ ಉರೂಸಿನಲ್ಲಿ ಇಂದು(26-02-2022) ನಡೆಯಬೇಕಿದ್ದ ಮದನೀಯಂ. ಮಜ್ಲಿಸ್ ದಿಢೀರನೆ ರದ್ದು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇಂದು ನಡೆಯಬೇಕಿದ್ದ ಮದನೀಯಂ ಮಜ್ಲಿಸ್ ರದ್ದಾಗಲು ಕಾರಣವೇನೆಂದರೆ, ಮಜ್ಲಿಸ್ ನಡೆಯುವ ಸಂದರ್ಭದಲ್ಲಿ ಬರುವ ದೇಣಿಗೆ ಉರೂಸ್ ಕಮಿಟಿಗೆ ನೀಡಬೇಕು ಎಂದು ಸಂಘಟಕರು ಕೇಳಿದ್ದಾರೆ, ಆದರೆ ಮದನೀಯಂ ಮಜ್ಲಿಸ್ ಗೆ ಬರುವ ದೇಣಿಗೆಯು ನೂರು ಸಾಧಾತುಗಳಿಗೆ ಮನೆ ನಿರ್ಮಾಣ ಮಾಡಿ ಕೊಡಲು ಜನರು ನೀಡವುದಾಗಿದೆ, ಹಾಗಾಗಿ ಅದನ್ನು ಇತರೆ ಕಾರಣಗಳಿಗೆ ನೀಡಲಾಗುವುದಿಲ್ಲ, ಈ ಕಾರಣದಿಂದಾಗಿ ಕಾರ್ಯಕ್ರಮವು ರದ್ದಾಗಿರುತ್ತದೆ ಎಂದು ಮದನೀಯಂ ಮಜ್ಲಿಸ್ ನೇತೃತ್ವ ನೀಡುತ್ತಿರುವ ಲತೀಫ್ ಸಖಾಫಿ ಕಾಂತಪುರಂ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.