ಬೆಳ್ತಂಗಡಿ (www.vknews.in) : ಮರಣ ಎನ್ನುವುದು ಎಲ್ಲರಿಗೂ ಹಕ್ಕಾಗಿದೆ. ಆದರೆ ನಮ್ಮ ಜೀವನಕ್ರಮ ಹೇಗಿರಬೇಕೆಂದರೆ ನಮ್ಮಮರಣದ ನಂತರವೂ ನಮ್ಮನ್ನು ಅನುಸ್ಮರಿಸುವ, ದಿಕ್ರ್ ತಸ್ಬೀಹ್, ತಹ್ಲೀಲ್ ಹೇಳುವ ಸಮೂಹವೊಂದನ್ನು ನಾವು ಸೃಷ್ಟಿಸಿಹೋಗಬೇಕು. ಅದು ಹೈದರ್ ನೀರ್ಸಾಲ್ ಅವರ ಮರಣದ ಬಳಿಕ ನಾವು ಸಾಕ್ಷೀಕರಿಸಿದ್ದೇವೆ ಎಂದು ಬೆಳ್ತಂಗಡಿ ದಾರುಸ್ಸಲಾಂ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯ ಸಯ್ಯಿದ್ ತ್ವಾಹಾ ಜಿಫ್ರಿ ತಂಙಳ್ ಹೇಳಿದರು.
ತಾಲೂಕು ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ಮುಸ್ಲಿಂ ಸಂಘಟನೆಗಳ ಸಹಭಾಗಿತ್ವದೊಂದಿಗೆ ಗುರುವಾಯನಕೆರೆ ಶಾದಿಮಹಲ್ನಲ್ಲಿ ಶುಕ್ರವಾರ ನಡೆದ ಮರ್ಹೂಮ್ ಹೈದರ್ ನಿರ್ಸಾಲ್ ಅನುಸ್ಮರಣ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು. ತಾಲೂಕು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯ ಆರಂಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ತಾಲೂಕು ಮಾಧ್ಯಮ ಸಂಯೋಜಕ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರು ಹೈದರ್ ನೀರ್ಸಾಲ್ ಅವರ ಜೀವನದ ಘಟ್ಟಗಳ ಬಗ್ಗೆ ಪ್ರಸ್ತಾವನೆಗೈದರು.
ವಿವಿಧ ಸಂಘಟನೆಗಳ ಪ್ರಮುಖರಾದ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಸದಸ್ಯ ನಝೀರ್ ಆಝ್ಹರಿ ಬೊಳ್ಮಿನಾರ್,ಇಮಾಮ್ಸ್ ಕೌನ್ಸಿಲ್ ರಾಜ್ಯ ಸಮಿತಿ ಕಾರ್ಯದರ್ಶಿ ಜಅಫರ್ ಫೈಝಿ,ಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ ಜಿಲ್ಲಾಧ್ಯಕ್ಷರಾದ ಮುಸ್ತಫಾ ಜಿ.ಕೆ, ಪೆರಾಲ್ದರಕಟ್ಟೆ ಮಸ್ಜಿದ್ ಖತೀಬ್ ಶಂಶುದ್ದೀನ್ ದಾರಿಮಿ, ರೇಂಜ್ ಅಧ್ಯಕ್ಷ ಅಶ್ರಫ್ ಫೈಝಿ ಹಾಗೂ ನ್ಯಾಯವಾದಿ ನವಾಝ್ ಶರೀಫ್ ಅರೆಕ್ಕಲ್ ಕಕ್ಕಿಂಜೆ ಅವರುಗಳು ಹೈದರ್ ನೀರ್ಸಾಲ್ ಅವರನ್ನು ಸಂಸ್ಮರಿಸಿ ಮಾತನಾಡಿದರು.
ವೇದಿಕೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ತಾಲೂಕು ಅಧ್ಯಕ್ಷ ಹಕೀಂ ಬಂಗೇರಕಟ್ಟೆ, ಎಸ್ವೈಎಸ್ ಸಂಘಟಕ ಜಮಾಲುದ್ದೀನ್ ಲ್ವತೀಫಿ ಲಾಡಿ, ಗುರುವಾಯನಕೆರೆ ಮಸ್ಜಿದ್ ಖತೀಬ್ ಶರೀಫ್ ಝುಹುರಿ ಉಪಸ್ಥಿತರಿದ್ದರು. ಅಕ್ಬರ್ ಬೆಳ್ತಂಗಡಿ, ನವಾಝ್ ಶರೀಫ್ ಕಟ್ಟೆ,ನಿಸಾರ್ ಕುದ್ರಡ್ಕ,ಅಬ್ದುರ್ರಝಾಕ್ ಕನ್ನಡಿಕಟ್ಟೆ, ಅಬ್ಬೋನು ಮದ್ದಡ್ಕ, ಆಲಿಯಬ್ಬ ಪುಲಾಬೆ, ಖಾಲಿದ್ ಪುಲಾಬೆ, ಶೇಕುಂಞಿ, ಹಾಜಿ ಉಸ್ಮಾನ್ ಶಾಫಿ ಮೊದಲಾದವರು ಸಹಕರಿಸಿದರು.
ಮೃತರ ಸಹೋದರ ಫಾರೂಕ್ ನೀರ್ಸಾಲ್, ಪುತ್ರ ಸಹಲ್ ನೀರ್ಸಾಲ್ ಮತ್ತು ಬಂಧುಗಳು, ಅವರ ಅಭಿಮಾನಿಗಳು ಭಾಗಿಯಾಗಿದ್ದರು. ಶಂಶುದ್ದೀನ್ ದಾರಿಮಿ ಅವರ ನೇತೃತ್ವದಲ್ಲಿ ಮೃತರ ಹೆಸರಿನಲ್ಲಿ ತಹ್ಲೀಲ್ ಹೇಳಿ ದುಆ ಸಲ್ಲಿಸಲಾಯಿತು. ನವಾಝ್ ಶರೀಫ್ ಕಟ್ಟೆ ಮತ್ತು ನಿಸಾರ್ ಗುರುವಾಯನಕೆರೆ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಕುವೆಟ್ಟು ಬ್ಲಾಕ್ ಕಾರ್ಯದರ್ಶಿ ಕರೀಂ ಗೇರುಕಟ್ಟೆ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.