ಕಲಬುರಗಿ (www.vknews.in) : ಕಲಬುರಗಿ ಜಿಲ್ಲೆಯ ಯರಗೋಳ ಗ್ರಾಮದಿಂದ ಶಹಬಾದ್ ಪಟ್ಟಣದಲ್ಲಿರುವ ತನ್ನ ಮಗಳ ಮನೆಗೆ 33 ಗೋವುಗಳನ್ನ ಕರೆದ್ಯೊಯ್ತಿದ್ದ ಮಹಿಳೆಯ ಮೇಲೆ ಹಿಂದೂ ಸಂಘಟನೆ ಕಾರ್ಯಕ್ರತರು ದಾಳಿ ನಡೆಸಿವೆ. ವಾಡಿ ಪಟ್ಟಣದ ಬಲರಾಮ ಚೌಕ್ ಬಳಿ ಈ ಘಟನೆ ನಡೆದಿದೆ.
ಅಕ್ರಮವಾಗಿ ಕಸಾಯಿಖಾನೆಗೆ ಗೋವುಗಳನ್ನು ಸಾಗಾಟ ಮಾಡುತ್ತಿದ್ದಿರಿ ಎಂದು ಅರೋಪಿಸಿ ಈ ದಾಳಿ ನಡೆಸಲಾಗಿದೆ. ಈ ಸಂಬಂಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮೌಖಿಕ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ವಾಡಿ ಠಾಣೆ ಪೊಲೀಸರು ಗೋವುಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.
ಆದರೆ ಮಹಿಳೆ ಹೇಳುತ್ತಿರುವುದೇ ಬೇರೇನೇ ಆಗಿದೆ. ಆಕಳನ್ನ ಕಟುಕರಿಗೆ ಮಾರಕ್ಕ ತಂದಿಲ್ರಿ. ನನ್ನ ಮಗಳ ಊರಿಗೆ ಬಿಡಲು ತಂದಿದ್ದೇನೆ. ಸಾಕುವ ಜಾನುವಾರುಗಳನ್ನ ನಾನು ಕಟುಕರಿಗೆ ಮಾರಲ್ಲರೀ ಸಾಹೇಬ್ರ. ನನಗೆ ಬಿಟ್ಟುಬಿಡ್ರೀ ಅಂತಾ ಗೋಳಾಡಿದ್ದಾರೆ ಮಹಿಳೆ. ಮಗಳ ಊರಿಗೆ ಇದನ್ನು ಒಯ್ಯುತ್ತಿದ್ದು, ನಾನು ಕಟುಕರಿಗೆ ಮಾರುತ್ತಿಲ್ಲ ಎಂದು ಮಹಿಳೆ ಗೋಳಾಡಿದ್ದಾರೆ.
ಆದರೂ ಪರವಾನಿಗೆ ಇಲ್ಲದೇ ಗೋವುಗಳ ಸಾಗಾಟ ಹಿನ್ನಲೆಯಲ್ಲಿ ಗೋವುಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಕೊಂಚೂರು ಪುಣ್ಯಕೋಟಿಗೆ ಕಳುಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.