ಕತಾರ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಸಂಘ ಕತಾರ್ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ವಾರ್ಷಿಕ ಒಳಾಂಗಣ ಕ್ರೀಡಾಕೂಟಗಳನ್ನು ನಡೆಸಿತು. ಕರ್ನಾಟಕದ ಸಂಪ್ರದಾಯಿಕ ಆಟಗಳಾದ ಚೌಕಾ ಬಾರಾ ಮತ್ತು ಅಳುಗುಳಿಮಣೆ ಆಟಗಳಲ್ಲಿ ದೋಹದಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಕಿರಿಯ ಮತ್ತು ವಯಸ್ಕರು ಭಾಗವಹಿಸಿದರು . ಕ್ರೀಡಾಕೂಟದ ಇತರ ಕ್ರೀಡೆಗಳಲ್ಲಿ ಚದುರಂಗ, ಕೇರಂ ಮತ್ತು ಟೇಬಲ್ ಟೆನ್ನಿಸ್ ಆಟಗಳನ್ನು ಸಹ ಒಳಗೊಂಡಿದ್ದವು. ಕ್ರೀಡಾಕೂಟದಲ್ಲಿ ದಾಖಲೆಯ ೧೫೦ಕ್ಕೂ ಹೆಚ್ಚು ಕ್ರೀಡಾ ಪಟುಗಳು ಭಾಗವಹಿಸಿದರು.
ಒಳಾಂಗಣ ಕ್ರೀಡೆಗಳ ರೋಮಾಂಚಕ ಸಮಾರೋಪ ಸಮಾರಂಭದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರು ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು, ಭಾರತೀಯ ಕ್ರೀಡಾ ಕೇಂದ್ರದ ಪ್ರತಿನಿಧಿ ಶ್ರೀ ಅನಿಲ್ ಬೋಳೂರು, ಭಾರತೀಯ ಸಾಂಸ್ಕೃತಿಕ ಹಿತೈಷಿ ವೇದಿಕೆಯನ್ನು ಪ್ರತಿನಿಧಿಸುವ ಶ್ರೀ ದಿನೇಶ್ ಗೌಡ, ಕರ್ನಾಟಕ ಸಂಘ ಕತಾರ್ನ ಮಾಜಿ ಅಧ್ಯಕ್ಷರಾದ ಡಾ. ಸಂಜಯ್ ಕುದ್ರಿ ಮತ್ತು ಶ್ರೀ ಅರುಣ್ ಕುಮಾರ್ ಹಾಗೂ ಕತಾರ್ನ ಅಖಿಲ ಕರ್ನಾಟಕ ಮೂಲದ ಸಂಘಗಳ ಅಧ್ಯಕ್ಷರು ಹಾಗೂ ಇತರ ಸಂಘಗಳ ಗಣ್ಯರು ಭಾಗವಹಿಸಿದ್ದರು.
ಕರ್ನಾಟಕ ಸಂಘ ಕತಾರ್ನ ಅಧ್ಯಕ್ಷರಾದ ಶ್ರೀ ಮಹೇಶ್ ಗೌಡ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದ ಎಲ್ಲ ಸ್ಪರ್ಧಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಮುಂಬರುವ ವರ್ಷಗಳಲ್ಲಿ ಈ ಕಾರ್ಯಕ್ರಮವನ್ನು ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಲು ಕರ್ನಾಟಕ ಸಂಘ ಕತಾರ್ ಬದ್ಧವಾಗಿದೆ ಎಂದು ಸಭೆಯಲ್ಲಿ ನೆರೆದಿದ್ದ ಎಲ್ಲರಿಗೂ ತಿಳಿಸಿದರು. ವಿಜೇತರಿಗೆ ಟ್ರೋಫಿಗಳನ್ನು, ಭಾರತೀಯ ಸಾಂಸ್ಕೃತಿಕ ಕೇಂದ್ರ ದೋಹಾದಿಂದ ಆಜಾದಿ ಕಿ ಅಮೃತ್ ಮಹೋತ್ಸವದ ಅಂಗವಾಗಿ ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾಕೂಟಗಳಲ್ಲಿ ಕರ್ನಾಟಕ ಸಂಘ ಕತಾರ್ ಅನ್ನು ಪ್ರತಿನಿಧಿಸಿದ ಸದಸ್ಯರಿಗೆ ಸನ್ಮಾನವನ್ನು ಸಹ ನಡೆಸಲಾಯಿತು.
ಸಮಾರೋಪ ಸಮಾರಂಭವನ್ನು ಕರ್ನಾಟಕ ಸಂಘ ಕತಾರ್ನ ಕ್ರೀಡಾ ಕಾರ್ಯದರ್ಶಿ ಶ್ರೀ ಜಾಕೀರ್ ಅಹಮದ್ ನಿರ್ವಹಿಸಿದರು ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ದಿಲೀಪ್ ಸಭೆಗೆ ಧನ್ಯವಾದಗಳನ್ನು ನೀಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.