(www.vknews.in)ಏಮ್ಸ್ ಕಾಲೇಜು ಜಿಲ್ಲಾ ಸಮೀತಿ ರಚನಾ ಸಮಾರಂಭವು, ಶ್ರೀಯುತ ಬಾಂಡ್ ತಿಪ್ಪೇಸ್ವಾಮಿ, ಅಧ್ಯಕ್ಷರು ಕೇಂದ್ರ ಸಮೀತಿ , ಏಮ್ಸ್ ವಿದ್ಯಾ ಸಂಸ್ಥೆ ಇವರ ಘನ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಜಿಲ್ಲಾ ಕಛೇರಿ ಶಾಲಿಮಾರ್ ಮ್ಯಾಂಗಲೋರ್ ಗೇಟ್ ಇಲ್ಲಿ ದಿನಾಂಕ 3:11:2022 ರಂದು ನಡೆಯಿತು. ಕಾರ್ಯಕ್ರಮವನ್ನು ಶ್ರೀಯುತ ಪ್ರೊಫೆಸರ್ ಎ ಎಂ ಖಾನ್ ರವರು ಮಾಜಿ ಕುಲಪತಿಗಳು ಮ0ಗಳೂರು ವಿ ವಿ ಇವರು ಉದ್ಘಾಟಿಸಿದರು. ಏಮ್ಸ್ ವಿದ್ಯಾ ಸಂಸ್ಥೆ (ರಿ) ಇದರ ಸ್ಥಾಪಕ ಟ್ರಸ್ಟಿ ಹಾಗೂ ಅಧ್ಯಕ್ಷ ರಾದ ಮ.ಫೌಝಿಯ ಬಿ.ಯಸ್ ರವರು ಪ್ರಾಸ್ತಾವಿಕ ವಾಗಿ ಸಂಸ್ಥೆಯ ಬಗ್ಗೆ ಹಾಗೂ ಜಿಲ್ಲಾ ಸಮಿತಿಯ ಧ್ಯೇಯ ಉದ್ದೇಶವನ್ನು ಸವಿಸ್ತಾರವಾಗಿ ಮಾತನಾಡಿದರು ಮತ್ತು ಏಮ್ಸ್ ವಿದ್ಯಾ ಸಂಸ್ಥೆಯ ಕೇಂದ್ರ ಸಮಿತಿಯ ನಿರ್ದೇಶಕರಾದ ಬಾಂಡ್ ತಿಪ್ಪೇಸ್ವಾಮಿ ಬೆಂಗಳೂರು ರವರ ನೇತೃತ್ವದಲ್ಲಿ ಜಿಲ್ಲಾ ಸಮಿತಿ ರಚನೆ ನಡೆಯಿತು . ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ (ಶಾಲಿಮಾರ್ ರಿಯಲ್ಟಿ ಹೋಲ್ಡಿಂಗ್ಸ್) ,ಗೌರವಾದ್ಯಕ್ಷರಾಗಿ ಎಂ ಎಚ್ ಮೊಯ್ದೀನ್ ಹಾಜಿ ಅಡ್ಡೂರು , ಗೌರವ ಸಲಹೆ ಗಾರರಾಗಿ ಪ್ರೊಫೆಸರ್ ಪಟ್ಟಾಭಿರಾಮ ಸೋಮಯಾಜಿ , ಉಪಾಧ್ಯಕ್ಷರಾಗಿ ಡಾ ಇ ಕೆ ಎ ಸಿದ್ದೀಕ್ (ರಿಫ ಪೊಲಿ ಕ್ಲಿನಿಕ್ )ಅಡ್ಡೂರು ಮತ್ತು ಪೌಲ್ಸ್ (ಅದ್ಯಕ್ಷರು ಗ್ಲೋಬ್ ಟಿವಿ)ಮಂಗಳೂರು ಪ್ರಧಾನ ಕಾರ್ಯದರ್ಶಿಗಳಾಗಿ ಡಾ ಇಸ್ಮಾಯಿಲ್ ಎನ್, (ನಿವೃತ ಪ್ರಾ0ಶುಪಾಲರು) ಜೊತೆ ಕಾರ್ಯದರ್ಶಿ ಗಳಾಗಿ ಅಬ್ದುಲ್ ಹಮೀದ್ ಕಣ್ಣೂರು, ಎಂ ಜಿ ಶಾಹುಲ್ ಹಮೀದ್ ಗುರುಪುರ, ಎ ಕೆ ರಿಯಾಝ್ ಅಡ್ಡೂರು, ಕೋಶಾಧಿಕಾರಿಯಾಗಿ ಸಾಜಿದ ಕಡಬ, ಸಂಘಟನಾ ಕಾರ್ಯದರ್ಶಿ ಯಾಗಿ ಬಾತಿಷ್ ಅಳಕೆಮಜಲು ಹಾಗೂ ಸದಸ್ಯರಾಗಿ ಬಿ ಮಹಮ್ಮದ್ ಸಾಹೇಬ್ (ಏಮ್ಸ್ ತಾಲೂಕು ಅಧ್ಯಕ್ಷರು) ಪುತ್ತೂರು, ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಮೊಯಿದಿನ್ ಕುಟ್ಟಿ (ಎಸ್ಡಿಎಂಸಿಸಿಎಫ್) ಪೆರ್ನೆ ,ದಿನೇಶ್ ಕಾಮತ್ ಪುತ್ತೂರು, ಲೋಕಯ್ಯ ಶಿಶಿಲ,ಅಲ್ತಾಫ್ ಅನ್ವರ್ ಬಿ ಯನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ಸ್ವಾಗತವನ್ನು ಸಂಸ್ಥೆಯ ಫೌಂಡರ್ ಟ್ರಸ್ಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೆಮೀರಾ ಕೆ.ಎ , ಸಂಸ್ಥೆಯ ಕೋಶಾಧಿಕಾರಿಯಾಗಿರುವ ಸಾಜಿದ ನಿರೂಪಣೆಯನ್ನು ಹಾಗೂ ಶಕೀಲಾ ಫರ್ವಿನ್ ಧನ್ಯವಾದವನ್ನು ಸಮರ್ಪಿಸಿದರು. ಸಹ್ಲ ಮತ್ತು ಶಬನಾ ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.