(www.vknews.in) ಪರಿಶಿಷ್ಟ ಜಾತಿ , ಪರಿಶಿಷ್ಟ ವರ್ಗ , ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೀಸಲಾದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ನಿಲ್ಲಿಸುವ ಮೂಲಕ ಸಂವಿಧಾನಿಕ ಹಕ್ಕು ಆದ ಶೈಕ್ಷಣಿಕ ಮೂಲಭೂತ ಹಕ್ಕನ್ನು ಉಲ್ಲಂಘನೆ ಮಾಡಲಾಗಿದೆ
ಉನ್ನತ ಶಿಕ್ಷಣದಲ್ಲಿ ಮುಸ್ಲಿಮ್ ಹಿಂದುಳಿದ ವಿದ್ಯಾರ್ಥಿಗಳಿಗೆ ಅವಕಾಶವನ್ನು ಒದಗಿಸಲು ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆ 1948 ರ ಪರಿಚ್ಚೇಧ 26 ರ ಅನ್ವಯ ಹಾಗೂ ಭಾರತದಲ್ಲಿ ಮುಸ್ಲಿಮರ ಸಾಮಾಜಿಕ , ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅಧ್ಯಯನದ ಆಧಾರದಲ್ಲಿ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ಕಲ್ಪಿಸುವ ಉದ್ದೇಶದಿಂದ ಅನುಷ್ಟಾನ ಗೊಳಿಸಿದ್ದ ಫೆಲೋಶಿಪ್ ವ್ಯವಸ್ಥೆಯನ್ನು ರದ್ದು ಪಡಿಸಲಾಗಿದೆ . ಸಾಚಾರ್ ಸಮಿತಿಯ ಶಿಫಾರಸ್ಸಿನ ಅನ್ವಯ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಈ ನಿಧಿಯನ್ನು ಸರಕಾರದ ಪ್ರತಿ ವರ್ಷದ ಬಜೆಟ್ ನಲ್ಲಿ ಮೀಸಲು ಇರಿಸಿ ಜಾರಿಗೊಳಿಸಲಾಗುತಿತ್ತು ಕೇಂದ್ರ ಸರ್ಕಾರದ ಈ ನಡೆ ದುಸ್ತರತೆ ಮತ್ತು ತುಳಿತಕ್ಕೊಳಗಾದ ಮತ್ತು ಅವಕಾಶ ವಂಚಿತ ವರ್ಗಗಳ ಶೈಕ್ಷಣಿಕ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ . ಕೇಂದ್ರದ ಈ ಕ್ರಮವು ದಲಿತ , ಬಹುಜನ , ಆದಿವಾಸಿ , ಮುಸ್ಲಿಮ್ , ಕ್ರೈಸ್ತ ಸಿಖ್ , ಪಾರ್ಸಿ ವಿದ್ಯಾರ್ಥಿಗಳ ವಿರೋಧಿ ನಡೆಯಾಗಿದೆ . ಇದು ರಾಷ್ಟ್ರೀಯ ಶಿಕ್ಷಣ ನೀತಿಯ ಗೌಪ್ಯ ಅಜೆಂಡಾಕ್ಕೆ ಸಾಕ್ಷಿಯಾಗಿದೆ . ರಾಷ್ಟ್ರೀಯ ಶಿಕ್ಷಣ ನೀತಿಯು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಪೂರ್ಣವಾಗಿ ದುರ್ಬಲಗೊಳಿಸುವುದರ ಜೊತೆಗೆ ಶಿಕ್ಷಣವನ್ನು ಮುಂದುವರಿಸಲು ಅವಕಾಶ ವಂಚಿತ ಸಮುದಾಯಗಳಿಗಿದ್ದ ಎಲ್ಲಾ ಉತ್ತೇಜಕಗಳನ್ನು ಸೀಮಿತಗೊಳಿಸುವ ಏಕೈಕ ಹುನ್ನಾರ ಮತ್ತು ಈ ಯೋಜನೆಗಳನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಿದೆ
ಜೀಷಾನ್ ಯುವ ಕಾಂಗ್ರೆಸ್ ಮುಖಂಡರು ಫಿಜಾ ಚಾರಿಟಬಲ್ ಟ್ರಸ್ಟ್ ಅರಕಲಗೂಡು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.