(www.vknews.in) ; ಖಿದ್ಮಾ ಫೌಂಡೇಶನ್ ಮಂಗಳೂರು ಇವರ ಆಶ್ರಯದಲ್ಲಿ 5 ಮಾರ್ಚ್ ಭಾನುವಾರದಂದು ದಾರವಾಡ ದ ರಂಗಾಯಣದಲ್ಲಿ ನಡೆದ ಕವಿ ಕಾವ್ಯಾ ರಾಜ್ಯಮಟ್ಟದ ಸಂಗಮ ಕಾರ್ಯಕ್ರಮದಲ್ಲಿ ಖಿದ್ಮ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಬೆಯ ಅಧ್ಯಕ್ಷತೆಯನ್ನು ಡಾ ಶ್ರೀ ಬಸವರಾಜ ಪೂಜಾರ ಸಿಂಡಿಕೇಟ್ ಸದಸ್ಯರು ವಿಜಯನಗರ ವಿಶ್ವವಿದ್ಯಾಲಯ ಬಳ್ಳಾರಿ ಇವರು ವಹಿಸಿಕೊಂಡಿದ್ದರು.
ಕವಿಗೋಷ್ಠಿ ಅಧ್ಯಕ್ಷತೆಯನ್ನು ಶ್ರೀಮತಿ ಶಾಂತ ಜಯಾನಂದ ಕವಿಗಳು ಬೆಂಗಳೂರು ಇವರು ವಹಿಸಿದ್ದರು ಪ್ರಶಸ್ತಿ ಪ್ರಧಾನವನ್ನು ಶ್ರೀ ಪರಶುರಾಮ ದಿವಾನದ, ಯೋಧರು ಹಾಗೂ ಸಮಾಜ ಸೇವಕರು ಶ್ರೀ ಕೆ ಆರ್ ಪಾಟೀಲ ಸೇವಕರು ಹುಬ್ಬಳ್ಳಿ ಧಾರವಾಡ, ಖಿದ್ಮ ಫೌಂಡೇಶನ್ ಅಧ್ಯಕ್ಷರಾದ ಆಶಿಮ್ ಬನ್ನೂರು ರಾಜ್ಯ ಆಯೋಜಕರು ಹಾಗೂ ಸಂಚಾಲಕರಾದ ಅಮೀರ್ ಬನ್ನೂರು ಮತ್ತಿತರ ಗಣ್ಯರು ವೇದಿಕೆ ಮೇಲೆ ಉಪಸ್ಥಿತಿ ಇದ್ದರು. ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಹಿತಿಗಳು ಕವಿಗಳು, ಕವಿತೆ ಕವನದ ಪ್ರಿಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.