ಮಂಗಳೂರು (www.vknews.in) : ಸೆ.20 ರಂದು ಪತ್ನಿಯೊಂದಿಗೆ ಉಮ್ರಾ ಯಾತ್ರೆಗೈದಿದ್ದ ಮಲಾರ್ ಹರೇಕಳದ ಅಬ್ದುಲ್ ಹಮೀದ್ (68) ಎಂಬವರು ಸೋಮವಾರ ರಾತ್ರಿ ಮದೀನಾದ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಮಂಗಳವಾರ ಮದೀನಾದಿಂದ ಊರಿಗೆ ಮರಳುವವರಿದ್ದರು. ಉಸಿರಾಟದ ತೊಂದರೆಗೀಡಾಗಿ ತೀವ್ರ ಅಸ್ವಸ್ಥಗೊಂಡ ಅವರನ್ನು ನಾಲ್ಕು ದಿನದ ಹಿಂದೆ ಮದೀನಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ರಾತ್ರಿ ನಿಧನರಾದರು. ಮೃತರ ಅಂತ್ಯಕ್ರಿಯೆಯು ಮದೀನಾದಲ್ಲೇ ನೆರವೇರಿಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.