ಮಂಗಳೂರು (www.vknews.in) : ದ.ಕ.ಜಿಲ್ಲೆಯ ಜನತೆ ಮೂಲತಃ ಸಹಿಷ್ಣುತಾ ಪ್ರಿಯರು,ಸಮಯ ಸಾಧಕರ ಹಾದಿಗೆ ಬಿದ್ದು ತಮ್ಮತನವನ್ನು ತಾತ್ಕಲಿಕವಾಗಿ ಕಳೆದು ಕೊಂಡವರು. ಈ ಬಾರಿ ಜನತೆ ಜಿಲ್ಲೆಯಿಂದ ಸಹಿಷ್ಣುತೆ ಪ್ರತಿಪಾದಕ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ರವರನ್ನು ದೆಹಲಿಗೆ ಕಳುಹಿಸಲಿದ್ದಾರೆ. ಕಳೆದ ಮೂರು ದಶಕಳಿಂದ ಜಿಲ್ಲೆಯ ಜನರ ನೈಜ ವೈಭವತೆಯನ್ನು ದೇಶದ ಮುಂದೆ ಪ್ರತಿಪಾದಿಸುವ ಪ್ರಯತ್ನವನ್ನು ಮಾಡದೆ ಇರುವ ಜನಪ್ರತಿನಿಧಿಗಳನ್ನು ಜನರು ಈ ಬಾರಿ ತೊರೆಯಲಿದ್ದಾರೆ.
ಅಷ್ಟೂ ವರ್ಷಗಳಲ್ಲಿ ಜಿಲ್ಲೆಯ ಸಾಮರಸ್ಯಕ್ಕೆ ಹುಳಿ ಹಿಂಡಿದ ಉದಾಹರಣೆಗಳು ನಮ್ಮಕಣ್ಣ ಮುಂದಿವೆ. ಅಂತಹ ಕುಹಕಿಗಳ ಪ್ರಯತ್ನದಿಂದಾಗಿ ಜಿಲ್ಲೆಯ ಜನತೆ ಇನ್ನಿಲ್ಲದ ಬೆಲೆ ತೆತ್ತಿರುವುದು ಖೇದಕರ. ಆದರೆ ಈ ಬಾರಿ ಜಿಲ್ಲೆಯ ಜನತೆ ದಾರ್ಶನಿಕತೆ, ಪ್ರತಿಪಾದತ್ವ ಮತ್ತು ಸಹಿಷ್ಣುತೆಯ ಪರವಾಗಿದ್ದಾರೆ. ಸಹಿಶ್ನುತೆ ಪ್ರತಿಪಾದಕ ಅಭ್ಯರ್ಥಿಯೇ ಮೂರು ದಶಕಗಳ ನಂತರ ಲೋಕಸಭೆ ಪ್ರವೇಶಿಸಲಿದ್ದಾರೆ. ಜಿಲ್ಲೆಯ ಜನತೆ ವಿಜಯಿಯಾಗಲಿದ್ದಾರೆ.
ಕೆ.ಅಶ್ರಫ್(ಮಾಜಿ ಮೇಯರ್) ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.