(www.vknews. in) ; ದೇಶದ ಮೂಲೆ ಮೂಲೆಗಳಲ್ಲಿ ಪ್ರತಿ ಪ್ರಜೆಗಳಿಗೆ ಅನ್ಯಾಯವಾಗುತ್ತಿದೆ. ಯಾವುದೇ ಪಕ್ಷ ಆಡಳಿತದಲ್ಲಿ ಇದ್ದರೂ ಕೂಡ ಕೊಲೆಗಳು ಮತ್ತು ಅತ್ಯಾಚಾರಗಳು ಆಗ್ತಾ ಇದೆ, ಒಂದು ಸರಕಾರ ರಚನೆ ಆಗಬೇಕಾದರೆ m p ,M L A ಎನ್ನು ನಾವು ಅಂದರೆ ಪ್ರಜೆಗಳು ಆಯ್ಕೆ ಮಾಡಿ ಕಳಿಸಬೇಕು, ನಾವು ಆಯ್ಕೆ ಮಾಡಿದ ಎಂಎಲ್ಎ ಮತ್ತು ಎಂಪಿ ದ್ರೋಹ ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ಪ್ರಜೆಗಳನ್ನು ತನ್ನ ಕಡೆ ಸೆಳೆಯುವ ಕೆಲಸ ಮಾಡುತ್ತಾರೆ, ಅದನ್ನು ಪ್ರಜೆಗಳು ನಂಬಿ ಅವರಿಗೆ ಮತ ಚಲಾಯಿಸಿ ಭ್ರಷ್ಟ ರಾಜಕೀಯದ ನಾಯಕರನ್ನು ಗೆಲ್ಲಿಸಿ ಕೊಡುತ್ತಾರೆ.
ಚುನಾವಣೆಯ ಸಮಯದಲ್ಲಿ ನಾನು ಪ್ರಜೆಗಳ ಸೇವೆ ಮಾಡುತ್ತೇನೆಂದು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ,ಅಂತ ಹೇಳಿ ಜನರನ್ನು ಮೂರ್ಖರನ್ನಾಗಿ ಮಾಡಿಬಿಡುತ್ತಾರೆ, ಒಮ್ಮೆ ಅನಿಸುವುದು ಮೊದಲಿನ ಕಾಲದಲ್ಲಿ ಶಿಕ್ಷಣ ಇಲ್ಲದವರು ಕೂಡ ನಮ್ಮಕಿಂತ ಶ್ರೇಷ್ಠ ವಿಚಾರವಂತರಾಗಿದ್ದರು ಅನ್ನಿಸುತ್ತಿದೆ, ಅಂಬೇಡ್ಕರ್ ಅವರು ಒಂದು ಮಾತನ್ನು ಹೇಳುತ್ತಾರೆ. ಪ್ರಜೆಗಳು ಯಾವಾಗ ರಾಜಕೀಯ ಶಿಕ್ಷಣವನ್ನು ಪಡೆಯುತ್ತಾರೆ ಆವಾಗಿನಿಂದ ರಾಜಕ್ಯದವರಿಗೆ ಭಯ ಹುಟ್ಟುತ್ತದೆ. ಆದರೆ ಅವರ ಮಾತು ಸುಳ್ಳು ಆಗುತ್ತಿದೆ, ಇನ್ನಾದರೆ ಎಚ್ಚೆತ್ತುಕೊಳ್ಳಿ ಯುವಕರೇ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸುದ್ದಾರೆ ಅವರು ಹಾಕುವ ಬಟ್ಟೆಗೆ ನಿಯತ್ತು ಕಂಡು ಬರುವುದಿಲ್ಲ, ಅವರಿಗೆ ಹಣ ಕೊಟ್ಟರೆ ಯಾವುದೇ ಕೆಲಸ ಬೇಕಾದರೂ ಆಗಬಹುದು, ಇದು ನಮ್ಮ ದೇಶದ ಹಣೆಬರಹ ಎಂದು ಹೇಳಬಹುದು , ಜನಸಾಮಾನ್ಯರು ಇನ್ನಾದರೂ ಎಚ್ಚೆತ್ತುಕೊಳ್ಳಿ, ಯುವಕರೇ ರಾಜಕೀಯದ ನಾಯಕರಿಗೆ ಇನ್ನಾದರೂ ಬೆಂಬಲ ಕೊಡುವುದನ್ನು ನಿಲ್ಲಿಸಿ ನಮಗೆ ಹಣ ಕೊಡುತ್ತಾರೆ ಅಂತ ಅವರಿಗೆ ಬೆಂಬಲ ಕೊಡುವುದನ್ನು ಯಾವತ್ತಿನಿಂದ ನಿಲ್ಲಿಸುತ್ತೇವೆ, ಅವತ್ತಿನಿಂದ ರಾಜಕೀಯ ನಾಯಕರಿಗೆ ಭಯ ಎನ್ನುವುದು ಹುಟ್ಟಿಕೊಳ್ಳಬಹುದು, ಮಧ್ಯಮ ವರ್ಗದವರು ಮತ್ತು ಜನಸಾಮಾನ್ಯರೆ ರಾಜಕಾರಣಿಗಳ ಹಿತಾಸಕ್ತಿಗೆ ಬಲಿಯಾಗಬೇಡಿ. ಸೌಜನ್ಯ ಲ ದುರಂತ ಸಾವಿಗೆ ಇನ್ನೂ ಕೂಡ ಸರಿಯಾದ ನ್ಯಾಯ ಸಿಕ್ಕಿಲ್ಲ, ಇದರಲ್ಲಿ ದುಷ್ಟರಿಗೆ ಶಿಕ್ಷೆ ಆಗಲೇಬೇಕು.
ಹೆಣ್ಣು ಮಕ್ಕಳನ್ನು ದೇವರಂತ ಪೂಜಿಸುವ ನಮ್ಮ ದೇಶದಲ್ಲಿ ಕಾನೂನು ಎಲ್ಲಿದೆ, ಮತ್ತು ನಾವು ಆಯ್ಕೆ ಮಾಡಿದಂತಹ ಎಂಎಲ್ಎ ಎಂಪಿಗಳು ಏನು ಮಾಡುತ್ತಿದ್ದಾರೆ ಕಾನೂನು ಮಾಡಿದವರೇ ಕಾನೂನನ್ನು ಉಲ್ಲಂಘಿಸಿದ್ದಾರೆ ಅದೇ ಈ ದೇಶದ ದುರಂತ , ಪ್ರಜೆಗಳೇ ಸಮಯ ಇನ್ನೂ ಕೂಡ ಮಿಂಚಿಲ್ಲ ಯೋಚನೆ ಮಾಡಿ ಅನ್ಯಾಯದ ವಿರುದ್ಧ ಧ್ವನಿ ಎತ್ತಲೇಬೇಕು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.