ವಿಟ್ಲ (www.vknews.in) : ಡಿ’ ಗ್ರೂಪ್(ರಿ) ವಿಟ್ಲ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇವರ ಜಂಟಿ ಸಹಯೋಗದೊಂದಿಗೆ ಯನಪೋಯ ಆಸ್ಪತ್ರೆಯ ಮಂಗಳೂರು ಇವರ ಸಹಕಾರದಲ್ಲಿ ವಿಟ್ಲ ಸ್ಮಾರ್ಟ್ ಸಿಟಿ ಬಳಿ ರಕ್ತದಾನ ಶಿಬಿರ ನಡೆಯಿತು. ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಕೆ.ಎಂ. ಅಬ್ಬಾಸ್ ಫೈಝಿ ಪುತ್ತಿಗೆ ದುವಾದ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಡಿ’ ಗ್ರೂಪ್ ಅಧ್ಯಕ್ಷ ವಿ.ಎಚ್. ರಿಯಾಝ್ ಆಧ್ಯಕ್ಷತೆ ವಹಿಸಿದ್ದರು. 104 ಮಂದಿ ರಕ್ತದಾನ ಮಾಡಿದರು. ಖ್ಯಾತ ತುಳು ಚಲನಚಿತ್ರ ನಟ ಸಂದೀಪ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಗೌರವ ಸಲಹೆಗಾರ ಝುಬೈರ್ ಮಾಸ್ಟರ್, ಗೌರವಾಧ್ಯಕ್ಷ ಅಝೀಝ್ ಸನ, ನಿಕಟಪೂರ್ವ ಅಧ್ಯಕ್ಷ ಖಲಂದರ್ ಪರ್ತಿಪ್ಪಾಡಿ, ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಜೊತೆ ಕಾರ್ಯದರ್ಶಿ ವಿ.ಕೆ.ಎಂ. ಹಂಝ, ಕೋಶಾಧಿಕಾರಿ ಬಶೀರ್ ಬೊಬ್ಬೆಕೇರಿ, ಪತ್ರಿಕಾ ಕಾರ್ಯದರ್ಶಿಗಳಾದ ಮಹಮ್ಮದ್ ಅಲಿ ಮತ್ತು ಅಬೂಬಕರ್ ಅನಿಲಕಟ್ಟೆ, ಸದಸ್ಯರಾದ ದಾವೂದ್ ಒಕ್ಕೆತ್ತೂರು, ರಾಝಿಕ್ ಕಿಸ್ವ, ಇರ್ಶಾದ್ ಸೆಲೆಕ್ಟ್, ಹಂಝ ವಿಟ್ಲ, ಸಮದ್ ಏರ್ ಸೌಂಡ್ಸ್, ಉಬೈದ್ ವಿಟ್ಲ, ತೌಸೀಫ್ ಎಂ.ಜಿ, ಹಮೀದ್ ಕಲ್ಲಿಪಾಲ, ರಿಯಾಝ್ ವಿ.ಪಿ, ಅನ್ಸಾರ್ ಅಲಿ, ಇರ್ಶಾದ್ ಮೇಗಿನಪೇಟೆ, ನೌಫಲ್ ಕೊಳಂಬೆ, ರಫೀಕ್ ಪೊನ್ನೋಟು, ರಫೀಕ್ ಅಮೇಝ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷರಾದ ನವಾಝ್ ಕಲ್ಲರಕೋಡಿ, ಕ್ಯಾಂಪ್ ಉಸ್ತುವಾರಿ ಫರ್ಝಾನ್ ಸಿದ್ದಕಟ್ಟೆ, ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.