ಮಾಣಿ (www.vknews. in) : ಸುನ್ನೀ ಯುವಜನ ಸಂಘ ಎಸ್ವೈಎಸ್ ಮಾಣಿ ಸರ್ಕಲ್ ವತಿಯಿಂದ ಇಸಾಬಾ ಲೀಡ್ ಕ್ಯಾಂಪ್ ಪಾಟ್ರಕೋಡಿ ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ಗುರುವಾರ ನಡೆಯಿತು.
ಹೈದರ್ ಸಖಾಫಿ ಶೇರಾ ಅಧ್ಯಕ್ಷತೆ ವಹಿಸಿ ದುಆ ಮಾಡಿ ಮಾತನಾಡಿದರು,ಸರ್ಕಲ್ ನಾಯಕರಾದ ರಫೀಕ್ ಮದನಿ ಪಾಟ್ರಕೋಡಿ ಸ್ವಾಗತಿಸಿದರು,ಸಿದ್ದೀಕ್ ಹಾಜಿ ಕಬಕ ಉದ್ಘಾಟನೆಗೈದು ಸಂಘಟನಾ ಕಾರ್ಯನಿರ್ಹಣೆ ಬಗ್ಗೆ ಮಾತನಾಡಿ ಉಪಯುಕ್ತ ಸಲಹೆ ಸೂಚನೆ ನೀಡಿದರು. ಸಯ್ಯಿದ್ ಸಾಬಿತ್ ಮುಈನೀ ಸಖಾಫಿ ತಂಙಳ್ ಶುಭಹಾರೈಸಿದರು. ಇಕ್ಬಾಲ್ ಬಪ್ಪಳಿಗೆ ಮತ್ತು ಸ್ವಾಲಿಹ್ ಮುರ ಇಸಾಬಾ & ಲೀಡ್ ತರಗತಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕೆ ಪಿ ಕಾಸಿಂ ಪಾಟ್ರಕೋಡಿ, ಶಾಹುಲ್ ಹಮೀದ್ ಕಬಕ, ನಝೀರ್ ಅಮ್ಜದಿ ದಾರುಲ್ ಇರ್ಶಾದ್, ಕಾಸಿಂ ಮುಸ್ಲಿಯಾರ್ ಸೂರ್ಯ, ಫಾರೂಕ್ ಹನೀಫಿ ಪರ್ಲೊಟ್ಟು, ರಝಾಕ್ ಹಾಜಿ ಕಸ್ತೂರಿ,ಕೆ ಎಸ್ ಯೂಸುಫ್ ಪಾಟ್ರಕೋಡಿ,ಜಲೀಲ್ ಮುಸ್ಲಿಯಾರ್ ಬುಡೋಳಿ, ಬಶೀರ್ ಪಾಟ್ರಕೋಡಿ,ಸಾಂತ್ವನ ನಝೀರ್ ಪಾಟ್ರಕೋಡಿ, ಸರ್ಕಲ್ ಇಸಾಬಾ ಕಾರ್ಯದರ್ಶಿ ಸಾಜಿದ್ ಪಾಟ್ರಕೋಡಿ,ಅಬೂಬಕ್ಕರ್ ಕೊಡಾಜೆ,ಶಾಫಿ ಪಂತಡ್ಕ,ಅಝೀಝ್ ಬಿಎಂಕೆ, ಮಜೀದ್ ಪಾಟ್ರಕೋಡಿ, ಎಸ್ಸೆಸ್ಸೆಫ್ ನಾಯಕರಾದ ಕೆ ಪಿ ಕಲಂದರ್, ಸಾಬಿತ್ ಪಾಟ್ರಕೋಡಿ,ಮುಂತಾದವರು ಉಪಸ್ಥಿತರಿದ್ದರು, ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.