ಮಂಗಳೂರು (www.vknews.in) : ಭಾರತ್ ಸೋಶಿಯಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ವತಿಯಿಂದ 73 ನೇ ಗಣರಾಜ್ಯೋತ್ಸವದ ಪ್ರಯುಕ್ತ ನಿವೃತ್ತ ಶಿಕ್ಷಕ ಹನೀಫ್ ಮಾಸ್ಟರ್ ರಿಗೆ ಸನ್ಮಾನ ಸಮಾರಂಭವು ಅವರ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟ್ರಸ್ಟ್ ನ ಅಧ್ಯಕ್ಷ ಮತ್ತು ಸಾಮಾಜಿಕ ಕಾರ್ಯಕರ್ತ ಎಂ. ಸಿ ಅಶ್ರಫ್, ಉಪಾಧ್ಯಕ್ಷ ನಿಯಾಝುರ್ರಹ್ಮಾನ್, ಮತ್ತು ಅಬ್ದುಲ್ಲಾ, ಕಾರ್ಯದರ್ಶಿ ಆಕಿಫುದ್ದೀನ್ ಇಂಜಿನಿಯರ್ ಸದಸ್ಯರಾದ ನೂರುಲ್ ಅಮೀನ್ ಉಪಸ್ಥಿತರಿದ್ದರು.
ಸ್ನೇಹ ಪಬ್ಲಿಕ್ ಸ್ಕೂಲ್ ಇದರ ಅಧ್ಯಾಪಕರಾದ ಅಶೀರುದ್ದೀನ್ ಸಾರ್ತಬೈಲ್ ಶಿಕ್ಷಕರ ಸೇವೆ ಮತ್ತು ತ್ಯಾಗದ ಬಗ್ಗೆ ಪ್ರಾಸ್ತಾವಿಕವಾಗಿ ನುಡಿದು ಅತಿಥಿಗಳನ್ನು ಸ್ವಾಗತಿಸಿದರು.
ನಂತರ ಬೀದರ್ ಜಿಲ್ಲೆಯಲ್ಲಿ ಹುಟ್ಟಿ ಬೆಳೆದು ತಮ್ಮ 40 ವರ್ಷದ ಸುಧೀರ್ಘ ಸಮಯವನ್ನು ವಿದ್ಯಾರ್ಥಿಗಳಿಗೆ ಜ್ಞಾನದ ದೀಪವನ್ನು ಧಾರೆಯೆರೆಯಲು ಮುಡಿಪಾಗಿಟ್ಟ ನಿಸ್ವಾರ್ಥ ಸೇವಕ ಹಾಗೂ ಎಲೆ ಮರೆಯ ಕಾಯಿಯಂತೆ ಇದ್ದ ಅವರ ಶ್ರಮ ತ್ಯಾಗವನ್ನು ಮನಗಂಡು ಭಾರತ್ ಸೋಷಿಯಲ್ ಅಂಡ್ ವೆಲ್ಫೇರ್ ವತಿಯಿಂದ ಹನೀಫ್ ಮಾಸ್ಟರ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಭಾರತ್ ಸೋಷಿಯಲ್ ಅಂಡ್ ವೆಲ್ಫೇರ್ ಮಾಡುತ್ತಿರುವ ಸೇವಾ ಕಾರ್ಯ ಶ್ಲಾಘನೀಯ. ನನ್ನ ಜೀವನದಲ್ಲಿ ಅತೀ ಶ್ರೇಷ್ಠ ಸನ್ಮಾನ ಇದಾಗಿದೆ ಎಂದು ಭಾವುಕರಾದರು. ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ಭಾರತ್ ಸೋಷಿಯಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ನ ಸದಸ್ಯರಾದ ನೂರುಲ್ ಅಮೀನ್ ಟ್ರಸ್ಟ್ ನ ಧ್ಯೇಯೋದ್ದೇಶ ವಿವರಿಸಿ ಮಾತನಾಡಿದರು. ಸುಲೈಮಾನ್ ಪಕ್ಕಲಡ್ಕ ನಿರೂಪಿದರು. ಸಾಜಿದ್ ಹಸನ್ ಸನ್ಮಾನ ಪತ್ರ ವಾಚಿಸಿದರು. ಮುಹಮ್ಮದ್ ಝಮೀರ್ ಧನ್ಯವಾದವಿತ್ತರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.