ಬಾಗಲಕೋಟೆ ಜಿಲ್ಲೆ (www.vknews.in) : ಬೈಕು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಹುನಗುಂದ ಪೊಲೀಸ್ ಠಾಣೆ ಸಿಬ್ಬಂದಿಯವರು ಬಂಧಿಸಿದ್ದಾರೆ ಹಾಗೂ ಕಳ್ಳತನವಾದ ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಶ್ರೀ ಲೋಕೇಶ ಜಗಲಾಸರ್ ಇವರ ನೇತೃತ್ವದಲ್ಲಿ ಹುನಗುಂದ ಪೋಲಿಸ್ ವೃತ್ತ ನಿರೀಕ್ಷಕರಾದ ಹೊಸಕೇರಪ್ಪ ಕೋಳೂರ ಹಾಗೂ ಪಿಎಸ್ಐ ಸೋಮನಗೌಡ ಗೌಡರ,ಮಹಿಳಾ ಪಿಎ ಸ್ಐ ಎಸ್ಆರ್ ನಾಯ್ಕ ನೇತೃತ್ವದ ಪೋಲಿಸ್ ತಂಡವು ನಾಲ್ವರು ಮೋಟಾರ ಸೈಕಲ್ ಕಳ್ಳರನ್ನು ಬಂಧಿಸಿ 85 ಮೋ ಟಾರ ಸೈಕಲಗಳು ಸೇರಿ ಒಟ್ಟು52ಲಕ್ಷ ರೂಪಾಯಿ ಮೌಲ್ಯ ದ ಸ್ವತ್ತನ್ನು ವಶಪಡಿಸಿಕೊಂಡ ಬಗ್ಗೆ ಹುನಗುಂದ ಪೋಲಿಸ್ ಠಾಣೆಯ ಸಭಾಂಗಣದಲ್ಲಿ ಪತ್ರಿಕಾ ಘೋಷ್ಠಿ ಜರುಗಿತು.
ಜಿಲ್ಲಾ ಪೋಲಿಸ್ ಅಧೀಕ್ಷಕರು ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ತಮ್ಮಮಾರ್ಗದರ್ಶನದಲ್ಲಿ& ಜಿಲ್ಲಾ ಡಿ.ಎಸ್.ಪಿ ಚಂದ್ರಕಾಂತ ನಂದರೆಡ್ಡಿ ನೇತೃತ್ವದಲ್ಲಿ ಕಳ್ಳಕಾರ ರಿಗೆ ಬಲೆ ಬೀಸಿ ಕಳ್ಳಕಾರರ ಜಾಲವನ್ನು ಭೇಧಿಸಿ ರಾಜ್ಯದ ಬೇರೆಬೇರೆ ಜಿಲ್ಲೆ,ತಾಲೂಕು ಗಳಲ್ಲಿ ಕಳೆದ 2ವರ್ಷ ಗಳಿಂದ ಮೋಟಾರ್ ಸೈಕಲ್ಲುಗಳನ್ನು ಕಳ್ಳತನವನ್ನೇ ದಂಧೆ ಮಾಡಿ ಕೊಂಡಿದ್ದ ನಾಲ್ವ ಕಳ್ಳರನ್ನು ಇಂದು ದಿನಾಂಕ 10-2- 2022 ರಂದು ಬೆಳಗಿನ ಜಾವ 4 ಗಂಟೆಗೆ ಊರ ಹೊರವಲಯದ ಸಾಯಿಸಾಗರ ರಾಷ್ಟ್ರೀಯ ಹೆದ್ದಾರಿ,ಸಾಯಿಸಾಗರ ಹೊ ಟೇಲ ಬಳಿ ಸಂಶೆಯಾಸ್ಪದ ಅಲೆದಾಡುತ್ತಿರುವಾಗ ನಾಲ್ವ ಕಳ್ಳಕಾರರನ್ನು ಭಂದಿಸಿ ಹುನಗುಂದ ಠಾಣೆಯ ಪೋಲಿಸ್ ವೃತ್ತ ನೀರೀ ಕ್ಷಕರು&ಪಿಎಸ್ಐಗಳ ಪೋಲಿಸ್ ತಂಡ ಇ ಷ್ಟೊಂದು ದೊಡ್ಡ ತನಖೆ,ಕಾರ್ಯಾಚರಣೆ ರಾಜ್ಯದಲ್ಲಿ ಅತ್ಯಂತ ದೊಡ್ಡ ಕಾರ್ಯಾಚರಣೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿ 25ಸಾವಿರ ರೂಪಾಯಿಗಳನ್ನು ನಗದು ಬಹುಮಾನ ಘೋಷಣೆ ಮಾಡಿದರು.
ಅಲ್ಲದೇ ಸುದ್ದಿಗಾರರು ಕೇಳಲಾದ ಪೋಲಿಸ್ ವಸತಿ ಗೃಹ ದುರಸ್ಥಿ,ನಗರದಲ್ಲಿಸಿಸಿ ಕ್ಯಾಮ ರಾಗಳ ಅಳ ವಡಿಕೆ, ಸಿಬ್ಬಂಧಿ ಕೊರತೆ, ಬಗ್ಗೆ ಸರ್ಕಾರವನ್ನೆ ಹೇಳಬೇಕೆಂದರು. ಈ ಸಂದರ್ಭದಲ್ಲಿ ಸಮಸ್ಥ ಹುನಗುಂದ ಪೋಲಿಸ್ ಠಾಣಾ ಸಿಬ್ಬಂದಿ ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.