ಸುರತ್ಕಲ್, ಎನ್ಐಟಿಕೆ ಅಕ್ರಮ ಟೋಲ್ ಗೇಟ್ ವಿರುದ್ಧದ ಧರಣಿ ಏಳನೇ ದಿನಕ್ಕೆ.
ಸುರತ್ಕಲ್ (www.vknews.in) : ಸಾಮಾಜಿಕ ಹೋರಾಟಗಾರ ಆಸಿಫ್ ಆಪದ್ಬಾಂಧವ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಎನ್ಐಟಿಕೆ ಅಕ್ರಮ ಟೋಲ್ ಗೇಟ್ ವಿರುದ್ಧದ ಅಹೋರಾತ್ರಿ ಧರಣಿಯು ರವಿವಾರ ಏಳನೇ ದಿನಕ್ಕೆ ಕಾಲಿರಿಸಿದೆ.
ರಾಜ್ಯ ಚಾಲಕರ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರು ಸತೀಶ್ ಆಚಾರ್ಯ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಬಡ ಚಾಲಕರನ್ನು ಬೆದರಿಸಿ ಹಣ ಪಡೆಯುತ್ತಾರೆ, ನ್ಯಾಯ ಪ್ರಶ್ನಿಸಿದರೆ ಮಾರಕಾಸ್ತ್ರ ಹಿಡಿದು ಚಾಲಕರ ಮೇಲೆಯೇ ಹಲ್ಲೆ ಮಾಡಲು ಮುಂದಾಗುತ್ತಾರೆ, ಆದ್ದರಿಂದ ಇಲ್ಲಿನ ಟೋಲ್ಗೇಟ್ ಗೂಂಡಾಗಿರಿ ಯನ್ನು ಆದಷ್ಟು ಬೇಗ ಮುಚ್ಚಲೇ ಬೇಕಾಗಿದೆ, ಮುಂದೆ ಬರುವ ಎಲ್ಲ ಹೋರಾಟದಲ್ಲೂ ಆಸಿಫ್ ಆಪತ್ಬಾಂಧವ ಅವರ ಜೊತೆ ನಾವೆಲ್ಲ ಭಾಗಿಯಾಗುತ್ತೇವೆ ಎಂದರು. ಗೌರವಧ್ಯಕ್ಷ ಸತೀಶ್ ದೇವಾಡಿಗ, ಕಾರ್ಯದರ್ಶಿ ರೋನಿ ಹಾಗೂ ಸದಸ್ಯರು ಧರಣಿ ವೇದಿಕೆಯಲ್ಲಿ ಪಾಲ್ಗೊಂಡರು.
ಕಿನ್ನಿಗೋಳಿ ವಲಯ ಬಸ್ ಚಾಲಕ-ನಿರ್ವಾಹಕರ ಸಂಘದ ಗೌರವಾಧ್ಯಕ್ಷ ಭಾಸ್ಕರ್ ಪೂಜಾರಿ, ಅಧ್ಯಕ್ಷ ರಾಮ್ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಹರೀಶ್ ಹಾಗೂ ಸದಸ್ಯರುಗಳು ಹೋರಾಟವನ್ನು ಉದ್ದೇಶಿಸಿ ಮಾತನಾಡಿ, ನಿಮ್ಮ ನಿಸ್ವಾರ್ಥ ಹೋರಾಟದಲ್ಲಿ ನಾವು ಕೂಡ ಸದಾ ಭಾಗಿಯಾಗಿರುತ್ತೇವೆ ಎಂದು ಬೆಂಬಲ ವ್ಯಕ್ತಪಡಿಸಿದರು.
ಈ ಮಧ್ಯೆ ಆಸಿಫ್ ಅವರ ಆರೋಗ್ಯದ ಸ್ಥಿತಿಯಲ್ಲಿ ಏರುಪೇರು ಕಂಡುಬಂದಿದ್ದು, ಸಾಯಂಕಾಲ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದಾಗ ಅಧಿಕಾರಶಾಹಿಗಳಿಂದ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಈ ಕಾರಣಕ್ಕಾಗಿ ತನ್ನ ಅಸೌಖ್ಯದ ಸ್ಥಿತಿಯಲ್ಲೂ ಕೈಕಾಲುಗಳಿಗೆ ಮತ್ತು ಬಾಯಿಗೆ ಸಂಕೋಲೆಯಿಂದ ಬಂಧನ ಮಾಡಿ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮೌಶೀದ್ ಸಾಮಾನಿಗ, ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ್ ಆರ್.ಕೆ, ಹಿರಿಯ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಉಡುಪಿ, ಸಾಮಾಜಿಕ ಹೋರಾಟಗಾರ ಶಶಿಧರ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರಾದ ರವಿ ಶ್ರೀಯಾನ್ ಹೊಸಬೆಟ್ಟು, ರಹಿಮಾನ್ ಇಡ್ಯಾ, ಫಯಾಜ್ ಕಂಚಿನಡ್ಕ, ಬಶೀರ್ ಬಂಟ್ವಾಳ ಮುಂತಾದವರು ಆಸಿಫ್ ಅವರ ಹೋರಾಟಕ್ಕೆ ಸಾಥ್ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.