ಹೃದಯದೊಳಗೆ ಜಾಗ ಕಲ್ಪಿಸಬೇಕು, ಮನಸ್ಸು ಮಾಡಿ ಸ್ವೀಕರಿಸಬೇಕು..
(www.vknews.in) : ಇಂದು ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಒಂದು ಹೋರಾಟ ಬೆಂಗಳೂರಿನಲ್ಲಿ ನಡೆಯುತ್ತಿದೆ. ಚಳವಳಿ ಮಾಡುತ್ತಿರುವವರು ಹೊರ ದೇಶದವರಲ್ಲ. ನಮ್ಮ ನಿಮ್ಮ ನಡುವಿನ ಬಂಧು ಬಳಗದವರು, ಗೆಳೆಯ ಗೆಳತಿಯರು ಮತ್ತು ಚಿಂತಕರು. ಪಠ್ಯ ಪುಸ್ತಕ ಪರಿಷ್ಕರಣೆಯ ಬಗ್ಗೆ ಒಂದಷ್ಟು ಅಸಮಾಧಾನ ಹೊಂದಿದ್ದಾರೆ. ಈಗ ಆಡಳಿತ ವ್ಯವಸ್ಥೆ ಏನು ಮಾಡಬೇಕು..
ವಾಸ್ತವದಲ್ಲಿ ಇದು ಅತ್ಯಂತ ಮಹತ್ವದ ಮಕ್ಕಳ ಭವಿಷ್ಯದ ಶಿಕ್ಷಣ ಕುರಿತಾದ ಸಮಸ್ಯೆ. ಜನ ಪ್ರತಿನಿಧಿಗಳು ಈ ಬಗ್ಗೆ ತುರ್ತಾಗಿ ವಿಧಾನ ಮಂಡಲದ ಅಧಿವೇಶನ ಕರೆದು ಚರ್ಚೆ ಮಾಡಿ ಒಮ್ಮತದ ಅಭಿಪ್ರಾಯ ರೂಪಿಸಲು ಪ್ರಯತ್ನಿಸಬೇಕು. ಇದರಲ್ಲಿ ಹಠ ಅಸೂಯೆ ಪಕ್ಷ ರಾಜಕೀಯ ಲಾಭ ಇರಲೇಬಾರದು. ಕಾರಣ ಇದು ಕಲಿಕಾ ಕ್ರಮದ ವಿಷಯ.
ಆದರೆ ಈ ರಾಜಕೀಯ ವ್ಯವಸ್ಥೆ ಸೂಕ್ಷ್ಮತೆಯನ್ನು ಕಳೆದುಕೊಂಡಿದೆ. ಮತಗಳ ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದೆ. ನಾವು ಮಾಡುವುದಾದರು ಏನು.. ನಮಗೆ ತಿಳಿದ ಒಂದಷ್ಟು ಸಲಹೆ ಸೂಚನೆ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದು ಅಷ್ಟೇ. ಶಿಕ್ಷಣ ಎಂಬುದು ಮಾನವೀಯತೆಯ ವಿಕಾಸ. ಈ ಹಿನ್ನೆಲೆಯಲ್ಲಿ..
ಹೀಗೆ ಅಥವಾ ಇದಕ್ಕಿಂತ ಉತ್ತಮ ಸಲಹೆಗಳು ಇದ್ದರೆ ಸರ್ಕಾರ ಅದನ್ನು ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಪಠ್ಯ ಪುಸ್ತಕ ಪರಿಷ್ಕರಣೆಯೂ ಒಂದು ದೊಡ್ಡ ವಿವಾದ ಆಗುವುದಾದರೆ ನಾವು ಇನ್ನೂ ಮಾನಸಿಕವಾಗಿ ದುರ್ಬಲ ವ್ಯವಸ್ಥೆಯಲ್ಲಿ ಇದ್ದೇವೆ ಎಂದೇ ಅರ್ಥ..
– ವಿವೇಕಾನಂದ ಹೆಚ್.ಕೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.