ಶಿವಮೊಗ್ಗದಲ್ಲಿ ಹರ್ಷ ಕುಟುಂಬಕ್ಕೆ ನೀಡಿದ ಅಷ್ಟೇ ಪರಿಹಾರ ಮೊತ್ತವನ್ನು ತಕ್ಷಣ ಮಸೂದ್ ಕುಟುಂಬಕ್ಕೂ ನೀಡಿರಿ.!
ಸುಳ್ಯ (www.vknews.in) : ಬೆಳ್ಳಾರೆ ಸಮೀಪದ ಕಳಂಜ ಎಂಬಲ್ಲಿ ಅಮಾಯಕ ಯುವಕನೊಬ್ಬನಿಗೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಯುವಕಾಂಗ್ರೆಸ್ ಪುತ್ತೂರು ನಗರ ಅಧ್ಯಕ್ಷ ಮೋನು ಬಪ್ಪಳಿಗೆ ಆಗ್ರಹಿಸಿದ್ದಾರೆ.
ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, ಶಾಂತವಾಗಿದ್ದ ಬೆಳ್ಳಾರೆಯಲ್ಲಿ ಗಲಭೆ ಸೃಷಿಸುವ ಸಂಘಪರಿವಾರದ ಹುನ್ನಾರವನ್ನು ಪೋಲಿಸ್ ಇಲಾಖೆ ಮಟ್ಟ ಹಾಕಬೇಕಿದೆ ಎಂದರು. ಹಾಗು ಆರೋಪಿಗಳಿಗೆ ಗರಿಷ್ಠ ಮಟ್ಟದ ಶಿಕ್ಷೆ ವಿಧಿಸಬೇಕೆಂದು ಪೋಲಿಸ್ ಇಲಾಖೆಯನ್ನು ಅವರು ಆಗ್ರಹಿಸಿದ್ದಾರೆ.
ಅಲ್ಲದೆ ಶಿವಮೊಗ್ಗದ ಹರ್ಷನಿಗೆ ನೀಡಿದ ರೀತಿಯಲ್ಲೇ ಸರಕಾರ ಮಸೂದ್ ಕುಟುಂಬಕ್ಕೂ ತಕ್ಷಣ ಪರಿಹಾರ ನೀಡಬೇಕೆಂದು ಮೋನು ಬಪ್ಪಳಿಗೆ ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.