ಕಣ್ಣೂರು (ವಿಶ್ವ ಕನ್ನಡಿಗ ನ್ಯೂಸ್) : ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಾಲ್ಕನೇ ಜಯಂತಿಯನ್ನು ವಿಮಾನ ನಿಲ್ದಾಣದಲ್ಲಿ ಆಚರಿಸಲಾಯಿತು. ಕೆಐಎಎಲ್ ಕಾರ್ಯನಿರ್ವಾಹಕ ನಿರ್ದೇಶಕ (ಎಂಜಿನಿಯರಿಂಗ್) ಕೆ.ಪಿ.ಜೋಸ್ ಕೇಕ್ ಕತ್ತರಿಸಿದರು.
ಆಪರೇಶನ್ಸ್ ಮ್ಯಾನೇಜರ್ ರಾಜೇಶ್ ಪೋಡುವಾಲ್, ಅಡ್ಮಿನಿಸ್ಟ್ರೇಷನ್ ಮ್ಯಾನೇಜರ್ ಅಜಯಕುಮಾರ್, ವಿಮಾನ ನಿಲ್ದಾಣದಿಂದ ಮೊದಲ ಪ್ರಯಾಣಿಕರ ಪ್ರತಿನಿಧಿಗಳು, ಟೀಮ್ ಹಿಸ್ಟಾರಿಕಲ್ ಫ್ಲೈಟ್ ಜರ್ನಿ ಸಂಯೋಜಕ ರಶೀದ್ ಕುಂಜಿಪರಲ್, ಅಬ್ದುಲ್ ಖಾದರ್ ಪಾಣಕ್ಕಾಟ್, ಬೈಜು ಕುಂದತಿಲ್, ಎಸ್.ಕೆ.ಶಂಸೀರ್, ಮುಹಮ್ಮದ್ ಫೈಸಲ್ ಮುಜಾಪಿಲಂಗಡ್, ಬಶೀರ್ ಮತ್ತಿತರರು ಭಾಗವಹಿಸಿದ್ದರು.
ಕಣ್ಣೂರು ವಿಮಾನ ನಿಲ್ದಾಣದ ನಾಲ್ಕನೇ ವಾರ್ಷಿಕೋತ್ಸವವನ್ನು ಅತ್ಯಂತ ಸರಳ ಸಮಾರಂಭದೊಂದಿಗೆ ನಡೆಸಲಾಯಿತು. ಗುರುವಾರ, ಕಣ್ಣೂರಿನಿಂದ ವಿಮಾನ ನಿಲ್ದಾಣಕ್ಕೆ ಸೈಕ್ಲಿಂಗ್ ಕಣ್ಣೂರು ನೇತೃತ್ವದಲ್ಲಿ ಸೈಕಲ್ ಪ್ರಯಾಣವನ್ನೂ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಪಥಸಂಚಲನ ಮತ್ತು ಸಿಐಎಸ್ಎಸ್ ಯೋಧರ ಗೌರವ ರಕ್ಷೆಯೂ ನಡೆಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.