(www.vknews.in) ; ಅರ್ಜುನ್ ಸ್ಪೋರ್ಟ್ಸ್ ಕ್ಲಬ್ ಮಂಜಲ್ಪಡುಪು ಮತ್ತು ಶ್ರೀ ಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ ಹಾಗೂ ಕೆ.ವಿ.ಜಿ ಮೆಡಿಲಕ್ ಕಾಲೇಜು ಸಹಯೋಗದೊಂದಿಗೆ ಪುತ್ತೂರಿನ ಮಾಜಿ ಶಾಸಕರಾದ ಶ್ರೀಮತಿ ಶಕುಂತಳಾ ಶೆಟ್ಟಿಯವರ ಜನ್ಮದಿನಾಚರಣೆಯ ಪ್ರಯುಕ್ತ ವೈದ್ಯಕೀಯ ಶಿಬಿರ ಮತ್ತು ಆರೋಗ್ಯ ಮಾಹಿತಿ ಕಾರ್ಯಗಾರ ಸುಧಾನ ವಸತಿಯುತ ಶಾಲೆ ಮಂಜಲ್ಪಡುಪು ಇಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಶಕುಂತಳಾ ಶೆಟ್ಟಿಯವರು ನೆರವೇರಿಸಿದರು. ಕೆ.ವಿ.ಜಿ ಮೆಡಿಕಲ್ ಕಾಲೇಜಿನ ವೈದ್ಯ ರಾದ ಗೀತಾ ದೊಪ್ಪ ರವರು ಆರೋಗ್ಯ ದ ಬಗ್ಗೆ ಮಾಹಿತಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಈ ಕಾರ್ಯ ಕ್ರಮದಲ್ಲಿ ವಿಜಯ ಹಾರ್ವಿನ್ , ಎಂ.ಬಿ ವಿಶ್ವನಾಥ ರೈ, ಮಹಮ್ಮದ್ ಬಡಗನ್ನೂರು, ಅಶೋಕ ಕುಮಾರ್ ರೈ, ಕೃಪಾ ಆಳ್ವಾ, ಅಂಗಾರ ಪಡೀಲ್,ಪದ್ಮನಾಭ ಪೂಜಾರಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಕೆ.ವಿ.ಜಿ ವೈದ್ಯಕೀಯ ಕಾಲೇಜಿನ ರಿಜಿಸ್ಟ್ರಾರ್ ಸಂದೇಶ್, ಡಾ.ರಾಜಾರಾಮ್ ಕೆ.ಬಿ, ಎಂ.ಯಸ್ ಮಹಮ್ಮದ್, ಚಂದ್ರಹಾಸ ಶೆಟ್ಟಿ, ಹೇಮನಾಥ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ಜಯಂತಿ ಬಲ್ನಾಡು, ಮಹಮ್ಮದ್ ಅಲಿ, ಶಿವರಾಮ್ ಆಳ್ವಾ, ಪ್ರಸಾಸ್ ಕೌಶಲ್ ಶೆಟ್ಟಿ,ಆಶೋಕ್ ಕುಮಾರ್ ರೈ,ಕೃಪಾ ಅಳ್ವಾ, ಸತೀಶ್ ಕಡೆಂಜಿ, ದಿವ್ಯಪ್ರಭ ಚಿಲ್ತಡ್ಕ,ಬಾಬು ರೈ ಕೋಟೆ,ವಸಂತ ಪೂಜಾರಿ,ಸಿರಿಲ್ ರೊಡ್ರಿಗಸ್,ಮಹಮ್ಮದ್ ರಿಯಾಝ್, ಯೂಸುಫ್ ಡ್ರೀಮ್,ಪದ್ಮ ನಾಮ ಪೂಜಾರಿ, ಶಾರದ ಅರಸ್, ಕೃಷ್ಣ ಪ್ರಸಾದ್ ಆಳ್ವಾ,ಆಶೋಕ್ ಪೂಜಾರಿ,ಶ್ರಿಪ್ರಸಾದ್, ವಿಶ್ವಜಿತ್ ಅಮ್ಮುಂಜೆ,ಚಿರಾಗ್ ರೈ,ಜಯಪ್ರಕಾಶ್ ಬದಿನಾರ್,ಶಕೂರ್ ಹಾಜಿ, ಶರೋನ್ ಸಿಕ್ವೇರಾ,ಆಶ್ರಪ್ ವಿಟ್ಲ, ಕೇಶವ ಪಡೀಲ್, ರಂಜೀತ್ ಬಂಗೇರಾ, ಪ್ರಹ್ಲಾದ್ ಬೆಳ್ಳಿಪ್ಪಾಡಿ,ಸನತ್ ರೈ ಏಳ್ನಾಡುಗುತ್ತು,ಸಂತೋಷ್ ಭಂಡಾರಿ ಚಿಲ್ಮೆತ್ತಾರು,ಸೀತಾ ಭಟ್, ಮೆಲ್ವೀನ್ ಮೊಂತೆರೂ,ಹಬೀಬ್ ಕಣ್ಣೂರು, ಮೋನು ಬಪ್ಪಳಿಗೆ,ಸಿದ್ದೀಕ್ ಸುಲ್ತಾನ್ ಭಾಗವಹಿಸಿದರು
ಅರ್ಜುನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶಕುಂತಳಾ ಶೆಟ್ಟಿಯವರ ಜನ್ಮ ದಿನದ ಪ್ರಯುಕ್ತ ಕೇಕ್ ಕಟ್ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಸಭಾ ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಮುರಳೀಧರ ರೈ ಮಠಂತಬೆಟ್ಟು ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಕೃಷ್ಣಪ್ಪ ಕಲಾವಿದ ನೆಹರು ನಗರ ನಡೆಸಿಕೊಟ್ಟರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.