ಉಪ್ಪಿನಂಗಡಿ (www.vknews. in) ; ಮನುಷ್ಯರ ಅರ್ದದಷ್ಟಿರುವ ಮಹಿಳೆಯರನ್ನು ಗಣನೆಗೆ ತೆಗೆದು ಕೊಳ್ಳದೇ ಕೇವಲ ಪುರುಷರಿಗೆ ಮಾತ್ರ ಶಿಕ್ಷಣ, ಸಂಸ್ಕಾರ ನೀಡಿದರೆ ಒಂದು ಸುಸಂಸ್ಕೃತ ಸಮಾಜ ನಿರ್ಮಾಣ ಗೊಳ್ಳುವುದು ಅಸಾಧ್ಯ. ಯಾಂತ್ರಿಕತೆಯ ಕೊಡುಗೆಯಿಂದಾಗಿ ಹದಗೆಟ್ಟ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮನೆಮಕ್ಕಳನ್ನು ಬಹಳ ಜವಾಬ್ದಾರಿಯುತವಾಗಿ ಬೆಳೆಸ ಬೇಕಾದರೆ ಮಹಿಳೆಯರಿಗೆ ಅದರ ತರಬೇತಿ ನೀಡ ಬೇಕಾದುದು ಕಾಲದ ಬೇಡಿಕೆಯಾಗಿದೆ. ಲೌಕಿಕ ಜ್ಞಾನ ಇಲ್ಲದ ಕೇವಲ ಧಾರ್ಮಿಕ ಶಿಕ್ಷಣ ಮತ್ತು ನೈತಿಕ ಶಿಕ್ಣಣ ಇಲ್ಲದ ಕೇವಲ ಲೌಕಿಕ ವಿದ್ಯೆಯು ಜನರನ್ನು ಪರಿಪೂರ್ಣರಾಗಿಸುವುದಿಲ್ಲ.
ಈ ನಿಟ್ಟಿನಲ್ಲಿ ಸಮನ್ವಯ ಶಿಕ್ಷಣವನ್ನು ಪ್ರೋತ್ಸಾಹಿಸುವ “ಸಮಸ್ತ”ದ ಫಾದಿಲ ಕೋರ್ಸ್ ನ್ನು ಅಳವಡಿಸಿ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಕೆಮ್ಮಾರ ಶಂಸುಲ್ ಉಲಮಾ ಕಾಲೇಜಿನ ಕಾರ್ಯವೈಖರಿ ಶ್ಲಾಘನೀಯವಾಗಿದೆ ಎಂದು “ಸಮಸ್ತ”ಕೇಂದ್ರೀಯ ಸಮಾಲೋಚನಾ ಸಮಿತಿಯ ಸದಸ್ಯರಾದ ಅಲ್ ಹಾಜಿ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್ ಹೇಳಿದ್ದಾರೆ. ಅವರು ಮೇ 12 ಆಧಿತ್ಯವಾರ ಕೆಮ್ಮಾರ ವುಮನ್ಸ್ ಕಾಲೇಜಿನ ಆರನೇ ವಾರ್ಷಿಕ ಹಾಗೂ ತೃತೀಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ಬಿ ದಾರಿಮಿ ಕಾಲದ ಕರೆಗೆ ಸ್ಪಂದಿಸದ ಯಾವ ಜನಾಂಗವೂ ಉದ್ದಾರ ಆಗುವುದಿಲ್ಲ. ಪಕ್ಷಿ ಮೃಗಗಳಿಗೆ ಬುದ್ದಿ ಇದ್ದರೂ ವಿಧ್ಯೆ ಇಲ್ಲದ ಕಾರಣ ಅವುಗಳನ್ನು ಸೃಷ್ಟಿಸುವಾಗ ಹೇಗಿತ್ತೋ ಹಾಗೇ ಇದೆ. ಆದರೆ ಮನುಷ್ಯನಿಗೆ ವಿದ್ಯೆ ಕಲಿಯವ ಅವಕಾಶ ದೇವನು ಕಲ್ಪಿಸಿದ್ದಾನೆ. ಆದ್ದರಿಂದ ಮನುಷ್ಯ ಅಭಿವೃದ್ದಿ ಸಾದಿಸಿದ್ದಾನೆ. ವಿದ್ಯೆಯನ್ನು ತಿರಸ್ಕಾರ ಮನೋಭಾವದಿಂದ ನೋಡಿದರೆ ಮನುಷ್ಯನೂ ಮೃಗದಂತೆ ಇರಬೇಕಾಗುತ್ತದೆ.
ಭಾರತದಂತಹ ವೈವಿಧ್ಯಮಯ ಸಂಸ್ಕೃತಿ ಇರುವ ದೇಶದಲ್ಲಿ ಪ್ರಜೆಗಳಿಗೆ ಸಾಮಾಜಿಕವಾಗಿ ಹೆಚ್ಚಿನ ಜವಾಬ್ದಾರಿ ಕೂಡಾ ಇದೆ. ಮತ ಧರ್ಮದ ಹೆಸರಲ್ಲಿ ಇತರರನ್ನು ದ್ವೇಷ ಮಾಡುವುದರಿಂದ ಸೌಹಾರ್ದ ಹದಗೆಟ್ಟು ಅರಾಜಕತೆ ಸೃಷ್ಟಿಯಾಗುತ್ತದೆ. ಇದಕ್ಕೆ ಕೆಲವೊಂದು ವಿದೇಶ ದೇಶಗಳೇ ಸಾಕ್ಷಿಯಾಗಿದೆ.
ಆದ್ದರಿಂದ ಎಳೆಯದರಲ್ಲೇ ಶಾಲಾ ಮಕ್ಕಳಿಗೆ ಎಲ್ಲಾ ಧರ್ಮೀಯ ಸಹಪಾಠಿಗಳೊಂದಿಗೆ ಪ್ರೀತಿ ಪೂರ್ವಕವಾಗಿ ಬೆರೆತು ಬಾಳುವ ಶಿಕ್ಷಣವನ್ನು ಮಹಿಳೆಯರು ಮನೆಯಲ್ಲೇ ನೀಡ ಬೇಕಾಗಿದೆ ಎಂದರು. ಇದೇ ಸಂಧರ್ಭದಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಹಿರಿಯರಾದ ಬಡಿಲ ಹುಸೈನ್ ರವನ್ನು ಸನ್ಮಾನಿಸಲಾಯಿತು.
ಸ್ಥಳೀಯ ಖತೀಬ್ ಶೌಕತ್ ಪೈಝಿ,ಜಿ.ರಪೀಕ್ ಹಾಜಿ ಗಂಡಿಬಾಗಿಲು,ಎಲ್ ಟಿ ರಝಾಕ್ ಹಾಜಿ ಪುತ್ತೂರು,ಬಶೀರ್ ಹಾಜಿ ದಾರಂದ ಕುಕ್ಕು,ರಶೀದ್ ಹಾಜಿ ಪರ್ಲಡ್ಕ ಯೂನಿಕ್ ಅಬ್ದುಲ್ ರಹಿಮಾನ್ ಮೊದಲಾದವರು ಸಂಧರ್ಭೋಚಿತವಾಗಿ ಮಾತನಾಡಿದರು. ಹಸೈನಾರ್ ಹಾಜಿ ಕೊಯಿಲ,ಇಸ್ಮಾಯಿಲ್ ಎನ್ ಕೆಮ್ಮಾರ,ಕಮಾಲ್ ಕೆಮ್ಮಾರ,ಇಸ್ಹಾಕ್ ಹಾಜಿ ಕೆಮ್ಮಾರ ,ಪುತ್ತ ಉಸ್ತಾದ್, ನಝೀರ್ ಕೊಯಿಲ, ಖಲಂದರ್ ಗಂಡಿಬಾಗಿಲು, ರಝಾಕ್ ಗಂಡಿಬಾಗಿಲು, ಜಲೀಲ್ ಕೆಮ್ಮಾರ ಮೊದಲಾವರು ಉಪಸ್ಥಿತರಿದ್ದರು. ಅಬ್ದುಲ್ ರಹ್ಮಾನ್ ಪೈಝಿ ಧನ್ಯವಾದ ಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.