(www.vknews.com) : ಕೊರೊನ ದಿಂದ ಬೇಸತ್ತು ಸಾಮಾನ್ಯ ಜನರು ಬೀದಿ ಪಾಲಾಗುವ ಸ್ಥಿತಿ ನಿರ್ಮಾಣ ವಾಗಿದೆ. ಅಕ್ಕಿ, ಹಾಗೂ ಬೆಳೆ ಕೊಟ್ಟು ತನ್ನ ಜವಾಬ್ದಾರಿ ಸಂಪೂರ್ಣವಾಗಿ ನಿಭಾಯಿಸಿದ್ದಾರೆಂಬ ಗರ್ವದಲ್ಲಿ ಸರಕಾರ ಇದೆ. ಏನೆ ಆದರೂ ನಾನು ಹಾಗೂ ನನ್ನ ಕುಟುಂಬ ಎಂಬ ನಿಟ್ಟಿನಲ್ಲಿ ಕೆಲವೊಂದು ಶ್ರೀಮಂತರಿದ್ದಾರೆ. ಆದರೆ ಮಂಗಳೂರು ತಾಲೂಕಿನ ಬಜಾಲ್ ಗ್ರಾಮದಲ್ಲೊಂದು ವಿಶಿಷ್ಟ ಅನುಭವ.
2020 ಏಪ್ರಿಲ್ 05 ನಮ್ಮ ಗ್ರಾಮ ಸಡಗರ ಸಂಭ್ರಮದಿಂದ ಕುಣಿದಾಡಿದ ದಿನ. ಬಜಾಲ್ ಗ್ರಾಮದ ಕಾರ್ಪೊರೇಟರಾದ ಅಶ್ರಫ್ ಹಾಗೂ D.K ಚಾರಿಟೇಬಲ್ ಜಂಟಿ ಸಾರಥ್ಯದಲ್ಲಿ ಗ್ರಾಮದ ಸುಮಾರು 1700 ರಷ್ಟು ಬಡವ ಹಾಗೂ ಮದ್ಯದ ವರ್ಗದ ಕುಟುಂಬಗಳಿಗೆ ದಿನಸಿ ಸಾಮಾನುಗಳು ನೀಡಿದರು.
ಚಾರಿಟಿ ಮೂಲಕ ಮನೆಮಾತದ ಕಾರ್ಪೊರೇಟರಿದ್ದರೆ ಅದು K.E ಅಶ್ರಫ್..
ಚುನಾವಣಾ ಸಮಯದಲ್ಲಿ ಮಾತ್ರ ಬಂದು ಆಶ್ವಾಸನೆ ನೀಡುವ ರಾಜಕಾರಣಿ ಗಳನ್ನು ನೊಡಿದ್ದೇವೆ. ಕೋಟ್ಯಾಂತರ ರುಪಾಯಿ ಗಳ ಆಸ್ತಿ ಹೊಂದಿದ ಶ್ರೀಮಂತರನ್ನು ನೋಡಿದ್ದೇವೆ. ಆದರೆ ಸದಾ ಸಮಯದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ಜನರ ಮನಗೆದ್ದ ನೇತಾರ ರಾಗಿದ್ದಾರೆ K.E ಅಶ್ರಫ್ ಹಾಗೂ D.K ಚಾರಿಟೇಬಲ್.
ಅವರಂತ ನೇತಾರರು ಪ್ರತಿಯೊಂದು ಗ್ರಾಮಗಳ ಚುಕ್ಕಾಣಿ ಹಿಡಿದರೆ ಈ ರಾಜ್ಯ ಮಾದರೀಯೊಗ್ಯ ರಾಜ್ಯವಾಗುದಕ್ಕೆ ಸಾದ್ಯ. ಜಾತಿ ಧರ್ಮ ಗಳ ಹೆಸರಿನಲ್ಲಿ ವಿಕೃತ ಮನೋಭಾವಗಳನ್ನು ಹೊಂದಿದ ಕೆಲವೊಂದು ರಾಜಕಾರಣಿ ಗಳಿಗೂ ಸಂಘಟನಾ ನೇತಾರರಿಗೂ, ಸಾಮಾಜಿಕ ಜಾಲತಾಣದ ವೀರರಿಗೂ ಇವರಿಂದ ಕಲಿಯಲು ಹಲವಾರು ಪಾಠಗಳಿವೆ.
✒️ ಆಸೀಫ್ ಬಜಾಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.