ಮಂಗಳೂರು (www.vknews.com) : ಕೋರೋಣ ನಿಯಂತ್ರಿಸುವುದರಲ್ಲಿ ಗೃಹಕಾರ್ಮಿಕರ ಸೇವೆ ಶ್ಲಾಘನೀಯ ಕಾವೂರ್ ಠಾಣಾಧಿಕಾರಿ ASI ಜಗನಾಥ್.ಕೆ ಅಭಿಪ್ರಾಯಪಟ್ಟರು.
ಅವರು ಅಂತರ್ರಾಷ್ಟ್ರೀಯ ಗೃಹ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಲೇಬರ್ ಕಚೇರಿ ಮಂಗಳೂರು ಮತ್ತು ಸ್ತ್ರೀ ಜಾಗೃತಿ ಸಮಿತಿ ಮಂಗಳೂರು ವತಿಯಿಂದ ಸ್ಥಳೀಯ ಗೃಹ ಕಾರ್ಮಿಕರಿಗೆ ಸ್ಯಾನಿಟೈಝೆರ್ ಮತ್ತು ಸಾಬೂನು ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೋರೋಣದಿಂದ ನಾವೆಲ್ಲರೂ ಜಾಗೃತರಾಗಬೇಕು ವಿಶೇಷವಾಗಿ ಗೃಹ ಕಾರ್ಮಿಕರು ಕರ್ತವ್ಯ ನಿರ್ವಹಿಸುವಾಗ ತಮ್ಮ ರಕ್ಷಣಾ ಕವಚ ಗಳನ್ನು ಬಳಸಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸ್ತ್ರೀ ಜಾಗೃತಿ ಸಮಿತಿ ಮಂಗಳೂರು ಇದರ ಸಂಚಾಲಕಿ ಡಾ.ಸಂಸದ್ ಕುಂಜತ್ತ್ ಬೈಲ್ ಮಾತನಾಡಿ ಗೃಹ ಕಾರ್ಮಿಕರು ಸ್ವಯಂ ಸ್ವಚ್ಛತೆಯಿಂದ ಇದ್ದು ಇತರರ ಸೇವೆ ಮಾಡಬೇಕು.ಗೃಹ ಕಾರ್ಮಿಕ ರ ಅರೋಗ್ಯಕೂಡ ಪ್ರಾಮುಖ್ಯವಾಗಿದೆ ಎಂದು ಹೇಳಿದರು.
ಕುಂಜತ್ತ್ ಬೈಲ್ ಅಂಗನವಾಡಿ ಕಾರ್ಯಕರ್ತೆ ಶಾಮಲತಾ ಕುಂಜತ್ತ್ ಬೈಲ್, ಗೃಹ ಕಾರ್ಮಿಕ ಹಕ್ಕುಗಳ ಒಕ್ಕೂಟದ ಕಾರ್ಯದರ್ಶಿ ಸೀತಾ ಉಪಸ್ಥಿತರಿದ್ದರು. ಹರ್ಷಿದ್ ಸ್ವಾಗತಿಸಿದರು. ಸದಸ್ಯೆ ಹೊನ್ನಮ್ಮ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.