ಕುಂದಾಪುರ ,(ವಿಶ್ವ ಕನ್ನಡಿಗ ನ್ಯೂಸ್ ): ಯುವ ಗ್ರಾಮೀಣ ಪ್ರತಿಭೆ ಸಿದ್ಧಾರ್ಥ್ ಜನ್ಸಾಲೆ ಯವರಿಗೆ ಡಾ| ಬಸವರಾಜ್ ಶೆಟ್ಟಿಗಾರ್ ಅವರು ಗೌರವಿಸಿ ಸನ್ಮಾನಿಸಿದರು.ಭಾರತ ಭೂಷಣ, ಜೀವಮಾನ ಶ್ರೇಷ್ಠ ಸಾಧಕ ಅಂತರಾಷ್ಟ್ರೀಯ ಪ್ರಶಸ್ತಿ ,ಡಾ| ಶಿವರಾಮ ಕಾರಂತ್ ಸದ್ಭಾವನಾ ಪ್ರಶಸ್ತಿ, ಜ್ಯೋತಿಷ್ಯ ಚೂಡಾಮಣಿ ,ಬಸವ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ, ವಾಸ್ತು ತಜ್ಞ, ಸಾಹಿತಿ, ಪ್ರಸಂಗಕರ್ತರಾಗಿರುವ ಡಾ| ಬಸವರಾಜ್ ಶೆಟ್ಟಿಗಾರ್ ಅವರು ಸಿದ್ಧಾರ್ಥ್ ಜನ್ಸಾಲೆ ಪ್ರತಿಭೆ ಗುರುತಿಸಿ ತಮ್ಮ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಿದರು . ಇತ್ತೀಚೆಗಷ್ಟೇ ನಿಮ್ಮ ವಿಶ್ವ ಕನ್ನಡಿಗ ನ್ಯೂಸ್ ಈತನ ಪ್ರತಿಭೆ ಬಗ್ಗೆ ಬೆಳಕು ಚೆಲ್ಲಿತ್ತು.
ಕಣ್ಮನ ಸೆಳೆಯುತ್ತಿರುವ ಯಕ್ಷಗಾನ ಕಲಾಕ್ರತಿಯ ನಿರ್ಮಾತೃ ‘ಸಿದ್ದಾರ್ಥ್ ಜನ್ಸಾಲೆ’ ಎಂಬ ಗ್ರಾಮೀಣ ಪ್ರತಿಭೆ !
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.