ಮಂಗಳೂರು (www.vknews.com) : ಕಲೆ ಹಾಗೂ ಕಲಾವಿದರಿಗೆ ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಪ್ರೋತ್ಸಾಹ ನೀಡುತ್ತಾ ಬಂದಿರುವ ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಶನಿವಾರ 2022 ರ ಶುಭಾರಂಭ ಹೊಸ ವರ್ಷದ ಮೊದಲ ದಿನ ಸಾಂಸ್ಕೃತಿಕ ಸಂಭ್ರಮ-2022 ಎಂಬ ಕಾರ್ಯಕ್ರಮವನ್ನು ಅನ್ ಲೈನ್ ಮೂಲಕ ಯಶಸ್ವಿಯಾಗಿ ನಡೆಸಲಾಯಿತು.
ಚೆನೈ ನಲ್ಲಿ ಬೆಂಕಿ ಮತ್ತು ಸುರಕ್ಷತಾ ಅಧಿಕಾರಿ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊಡಗಿನ ರಶ್ಮಿ ಚಂಗಚಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.ರಂಗಭೂಮಿ ಹಾಗೂ ಚಲನಚಿತ್ರ ನಟ ಮಂಜು ರೈ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಚಿತ್ರಾಲಿ ಮಂಗಳೂರು, ನೇಹಾ ಆರ್ ಕುಂದಕರ ಬೇಲೂರು, ಅನುಷ್ಕಾ ಆರ್.ಟಿ ಬೆಂಗಳೂರು, ಶ್ರೀರಕ್ಷಾ ಉಪಾಧ್ಯಾಯ ಹಾಸನ, ಪದ್ಮಪ್ರಿಯಾ ಕೇಳ ಮೂಡುಬಿದಿರೆ, ಐಶ್ವರ್ಯ ಎ. ರಾವ್ ಮಂಗಳೂರು, ಸೌಮ್ಯ ಎಸ್. ಜೈನ್ ಬಲಿಗೆ, ಕವಿತಾ ಉಮೇಶ್ ಉಜಿರೆ, ಪ್ರಾಪ್ತಿ ಜೈನ್ ಪುಣೆ,ಶ್ರೀಮನ್ಮ ಬಲ್ಲಾಳ್ ಪದ್ಮುಂಜ, ನಿತ್ಯ ಡಿ. ಹೊರನಾಡು, ಚಿಂತನಾ ಡಿ. ಹೊರನಾಡು, ಸುಶಾ ಎಲ್. ಆಚಾರ್ಯ ಮಂಗಳೂರು, ಯಶಾ ಎಲ್. ಆಚಾರ್ಯ ಮಂಗಳೂರು, ಮೌಲ್ಯ ವೈ. ಜೈನ್ ಮೂಡುಬಿದಿರೆ,ಮನ್ವಿತ್ ವೈ.ಜೈನ್ ಮೂಡುಬಿದಿರೆ, ಭವಿಷ್ಯ ಭಂಡಾರಿ ಮುಂಬೈ ಭಾಗವಹಿಸಿದ್ದರು. ಶ್ರೇಯಾ ಎಸ್.ಜೈನ್ ಮಂಗಳೂರು ಹಾಗೂ ಚಿರಾಗ್ ಬಜಾಜ್ ಕಾರ್ಯಕ್ರಮ ನಿರೂಪಿಸಿದರು. ನಿರಂಜನ್ ಜೈನ್ ಕುದ್ಯಾಡಿ ಸಹಕರಿಸಿದರು. ಸುದೇಶ್ ಜೈನ್ ಮಕ್ಕಿಮನೆ ಸಂಯೋಜಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.