ಕನ್ಯಾನ (ವಿಶ್ವ ಕನ್ನಡಿಗ ನ್ಯೂಸ್) : ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಸಸ್ಯ ಜೈವಿಕ ರಾಸಾಯನ ವಿಭಾಗದ ವಿಧ್ಯಾರ್ಥಿನಿ ಕುಮಾರಿ ವಂದನಾ ಸುಮಾಂತ್ ಚಿನ್ನದ ಪದಕ ಪಡೆದಿದ್ದಾರೆ.
ಧಾರವಾಡ ಕರ್ನಾಟಕ ಕೃಷಿ ವಿಶ್ವವಿದ್ಯಾನಿಲಯದ 35ನೇ ಘಟಿಕೋತ್ಸವದಲ್ಲಿ ವಂದನಾ ಸಾಮಂತ್ ಅವರಿಗೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಿದರು.
ಕೋಡಿಂಬಾಡಿ ಗ್ರಾಮದ ನೆಕ್ಕರಾಜೆ ನಿವಾಸಿಗಳಾದ ಕೃಷಿಕ ರಮೇಶ್ ಸಾಮಂತ್ ಮತ್ತು ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯೆ ರಾಧಿಕಾ.ಆರ್ ಸಾಮಂತ್.ಅವರ ಪುತ್ರಿಯಾದ ವಂದನಾ ಅವರು ಕೋಡಿಂಬಾಡಿ.ಹಿ ಪ್ರಾ . ಶಾಲೆ, ತೆಂಕಲ ವಿವೇಕಾನಂದ, ನೆಹರೂನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾಬ್ಯಾಸ ಪೂರೈಸಿದ ಬಳಿಕ ಹಾಸನ ಮಹಾವಿದ್ಯಾಲಯದ ಸಸ್ಯ ಜೈವಿಕ ರಾಸಾಯನ ವಿಭಾಗದಲ್ಲಿ ಬಿ.ಎಸ್ಸಿ ಮಾಡಿದ್ದರು. ನಂತರ ಧಾರವಾಡ ಕೃಷಿ ಕರ್ನಾಟಕ ವಿಶ್ವವಿದ್ಯಾನಿಲಯದದಲ್ಲಿ ಎಂ ಎಸ್ಸಿ ಮಾಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.