ಎಲಿಮಲೆ(ವಿಶ್ವಕನ್ನಡಿಗ ನ್ಯೂಸ್): ಸುಳ್ಯತಾಲೂಕಿನ ಎಲಿಮಲೆ ಬದ್ರಿಯಾ ಜಮಾಅತ್ ಇದರ ಅಧೀನದಲ್ಲಿರುವ ಹಯಾತುಲ್ ಇಸ್ಲಾಂ ದರ್ಸ್ ಇದರ ಉಧ್ಘಾಟನಾ ಕಾರ್ಯಕ್ರಮ ಹಾಗೂ ಸ್ವಲಾತ್ ಮಜ್ಲಿಸ್ ನಾಳೆ ಎಲಿಮಲೆ ಮಸೀದಿ ವಠಾರದಲ್ಲಿ ನಡೆಯಲಿದೆ.
ಸರಿಸುಮಾರು ನಲ್ವತ್ತು ವರ್ಷದ ಇತಿಹಾಸವಿರುವ ಹಲವಾರು ಪಂಡಿತರನ್ನು ಸಮುದಾಯಕ್ಕೆ ಸಮರ್ಪಿಸಿದ ಹೆಮ್ಮೆಯಿರುವ ಹಯಾತುಲ್ ಇಸ್ಲಾಂ ದರ್ಸ್ ರಜಾ ಬಿಡುವು ಕಳೆದು ನೂತನ ಮುದರ್ರಿಸರಾದ ಸೈಯಿದ್ ಮುಹ್ಸಿನ್ ತಂಙಳ್ (ಕಲ್ಲೇರಿ ತಂಙಳ್) ಇವರ ನೇತೃತ್ವದಲ್ಲಿ ನಾಳೆ ಸಂಜೆ ಮಗ್ರಿಬ್ ನಮಾಝಿನ ನಂತರ ಉಧ್ಘಾಟನೆಗೊಳ್ಳಲಿದೆ.
ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಪಾಣಾಜೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸೈಯಿದ್ ನೂರುಸ್ಸಾದಾತ್ ಬಾಯಾರ್ ತಂಙಳ್ ದುಆ ಹಾಗೂ ಸ್ವಲಾತ್ ಮಜ್ಲಿಸ್ ಗೆ ನೇತೃತ್ವ ನೀಡಲಿದ್ದಾರೆ. ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರು ಭಾಗವಹಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಹಂಝ ಮಿಸ್ಬಾಹಿ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಲಿಮಲೆ ದರ್ಸ್ ಸಹ ಮುದರ್ರಿಸ್ ಅನಸ್ ಅಝ್ಹರಿ ಪೊಯ್ಯತ್ತಬೈಲ್, ಉಸ್ತಾದರುಗಳು, ಜಮಾಅತ್ ಪದಾದಿಕಾರಿಗಳು ಊರ ಮಹನೀಯರು ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ವಿಜಯಿಗೊಳಿಸಬೇಕಾಗಿ ಜಮಾಅತ್ ಕಾರ್ಯದರ್ಶಿ ಸಿದ್ದೀಕ್ ಎಲಿಮಲೆಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.