ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಕನ್ನಡ ಜಿಲ್ಲೆಯ ವಿಶ್ವಾದ್ಯಂತ ಹೆಸರು ಪಡೆದಂತಹ ಜಿಲ್ಲೆ ಬಜ್ಪೆ ಇಲ್ಲಿನ ರಸ್ತೆ ಹೊಂಡ, ಚರಂಡಿ ಎಂಬುದು ಇಲ್ಲವೆ ಇಲ್ಲ ಬಸ್ಸು ಸಂಚರಿಸುವ ಮಾರ್ಗದಲ್ಲಿ ತುಂಬಿತುಳುಕುತ್ತಿದೆ ನೀರು, ಚರಂಡಿ ಮಾಯವಾಗಿದೆ ಎಂದು ಶಾಹುಲ್ ಹಮೀದ್ ಹೇಳಿದರು.
ಇದನ್ನೆಲ್ಲ ನೋಡುವಾಗ ಯಾವುದೋ ಅಲ್ಲಿ ಪ್ರದೇಶದಲ್ಲಿದ್ದೇವೆ ಎಂಬುದು ನಮಗೆ ಅನುಮಾನ, ಯಾಕೆಂದರೆ ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕರು ಎಲ್ಲಿ ಮಲಗಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ ಯಾಕೆಂದರೆ ಬಜ್ಪೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ಇದು ಬಜ್ಪೆ ನಾಗರಿಕರ ದುರಂತ, ಬಜ್ಪೆ ಪಟ್ಟಣ ಪಂಚಾಯತ್ ಬಂದ ಮೇಲೆ ಬಜ್ಪೆ ನಾಗರಿಕರು ನರಕ ಯಾತನೆ ಅನುಭವಿಸುತ್ತಿದ್ದಾರೆ ಇದು ನಾವು ಸಹಿಸುವುದಿಲ್ಲ ಎಂದು ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್ ಗುಡುಗಿದ್ದಾರೆ.
10 ದಿವಸದೊಳಗೆ ರಸ್ತೆ ಹಾಗೂ ಹೊಂಡ ಸರಿಪಡಿಸದಿದ್ದರೆ ಬಜ್ಪೆ ವಲಯ ಕಾಂಗ್ರೆಸ್ ವತಿಯಿಂದ ಉಗ್ರ ಹೋರಾಟ ಅನಿವಾರ್ಯ ಎಂದು ಶಾಹುಲ್ ಹಮೀದ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.