ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗ ಇದರ ಆಶ್ರಯದಲ್ಲಿ “ಪ್ರವಾದಿ ಮುಹಮ್ಮದ್ﷺ ಮಾನವೀಯತೆಯ ಮಹಾನಾಯಕ” ಎಂಬ ಧ್ಯೇಯ ವಾಕ್ಯ ದೊಂದಿಗೆ ಮೀಲಾದುನ್ನೆಬೀ ಪ್ರಯುಕ್ತ ಹಮ್ಮಿಕೊಂಡ ಬೃಹತ್ ರಕ್ತ ದಾನ ಶಿಬಿರವು ಬ್ಲಡ್ ಬ್ಯಾಂಕ್, ಮಿನಿಸ್ಟರಿ ಒಫ್ ಹೆಲ್ತ್ ಬೌಶರ್ ಒಮಾನ್ ಇವರ ಸಂಯೋಗದೊಂದಿಗೆ ಬಹಳ ಯಶಸ್ವಿಯಾಗಿ ನಡೆಯಿತು.
ಶಿಬಿರದಲ್ಲಿ ಬ್ಲಡ್ ಬ್ಯಾಂಕ್ ಡಾಕ್ಟರ್ ಗಳು ಹಾಗೂ ಸಿಬ್ಬಂದಿಗಳು ಸಂಯೋಜಕರಾಗಿ ಸಹಕರಿಸಿದರು.
ಕಾರ್ಯಕ್ರಮ ದಲ್ಲಿ ಕೆಸಿಎಫ್ ಒಮಾನ್ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿ, ಕೋಶಾಧಿಕಾರಿ ಜನಾಬ್ ಆರಿಫ್ ಕೋಡಿ, ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ, ಸಂಘಟನಾ ಅಧ್ಯಕ್ಷ ಉಬೈದುಲ್ಲಾ ಸಖಾಫಿ ಮಿತ್ತೂರು, ಸಾಂತ್ವನ ವಿಭಾಗದ ಅಧ್ಯಕ್ಷ ಕಲಂದರ್ ಬಾಷ ತೀರ್ಥ ಹಳ್ಳಿ, ಕೆಸಿಎಫ್ ಅಂತರಾಷ್ಟ್ರೀಯ ಇಹ್ಸಾನ್ ವಿಭಾಗದ ಕಾರ್ಯದರ್ಶಿ ಹಂಝ ಹಾಜಿ ಕನ್ನಂಗಾರ್ ,KCF ಒಮಾನ್ I – Team ಕೋರ್ಡಿನೇಟರ್ ಹನೀಫ್ ಮನ್ನಾಫು,ಕೆಸಿಎಫ್ ಒಮಾನ್ ಶಿಕ್ಷಣ ವಿಭಾಗದ ಅಧ್ಯಕ್ಷ ಝಬೈರ್ ಸ ಅದಿ ಪಾಟ್ರಕೋಡಿ, ಪಬ್ಲಿಷಿಂಗ್ ವಿಭಾಗದ ಅಧ್ಯಕ್ಷ ಇರ್ಫಾನ್ ಕೂರ್ನಡ್ಕ, ಕೆಸಿಎಫ್ ನಿಝ್ವಾ ಝೋನ್ ಅಧ್ಯಕ್ಷರಾದ ಹುಸೈನ್ ತೀರ್ಥ ಹಳ್ಳಿ, ಕೆಸಿಎಫ್ ಸೀಬ್ ಝೋನ್ ಅಧ್ಯಕ್ಷ ಜಸೀಮ್ ಅಹಮದ್, ಬೌಷರ್ ಝೋನ್ ಅಧ್ಯಕ್ಷ ಸಲೀಂ ಮಿಸ್ಬಾಯಿ ಉಸ್ತಾದ್, ಮಸ್ಕತ್ ಝೋನ್ ಅಧ್ಯಕ್ಷ ಶಫೀಕ್ ಮಾರ್ನಬೈಲು ಇವರು ಉಪಸ್ಥಿತರಿದ್ದರು.
ಕೆಸಿಎಫ್ ಒಮಾನ್ ಐಟೀಮ್ , ಕೆಸಿಎಫ್ ಬೌಷರ್ ಝೋನ್, ಕೆಸಿಎಫ್ ಸೀಬ್ ಝೋನ್, ಕೆಸಿಎಫ್ ನಿಝ್ವಾ ಝೋನ್ ಹಾಗೂ ಕೆಸಿಎಫ್ ಮಸ್ಕತ್ ಝೋನ್ ಕಾರ್ಯಕರ್ತರು ಹಾಗೂ ಇತರರು ಸೇರಿ 50 ಕ್ಕೂ ಜನರು ರಕ್ತದಾನ ಮಾಡಿ ಸಹಕರಿಸಿದರು, ಕೆಸಿಎಫ್ ಒಮಾನ್ ಸಾಂತ್ವನ ವಿಭಾಗದ ಕಾರ್ಯದರ್ಶಿ ಅಬ್ಬಾಸ್ ಮರಕಡ ಸುಳ್ಯ ಸ್ವಾಗತಿಸಿ ಹಾರಿಸ್ ಕೊಳಕೇರಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.